ಮುಹಮ್ಮದ್ ಮುಸ್ಲಿಯಾರ್
ಮಂಗಳೂರು, ಮೇ 16: ನಗರದ ಕಂಕನಾಡಿಯ ರಹ್ಮಾನಿಯಾ ಮದ್ರಸದ ಸದ್ರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ (75) ಬುಧವಾರ ಮಧ್ಯಾಹ್ನ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಮಂಜೇಶ್ವರ ನಿವಾಸಿಯಾಗಿದ್ದ ಮುಹಮ್ಮದ್ ಮುಸ್ಲಿಯಾರ್ ಕಂಕನಾಡಿಯ ಮದ್ರಸದಲ್ಲಿ ಕಳೆದ 30 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ನಗರದ ಅಝ್ಹರಿಯಾ ಮದ್ರಸದಲ್ಲೂ ಮುಅಲ್ಲಿಂ ಆಗಿ ಕರ್ತವ್ಯ ನಿರ್ವಹಿಸಿದ್ದರು. ಮನೆ ಮನೆಗೆ ತೆರಳಿ ಮಕ್ಕಳಿಗೆ ಮದ್ರಸ ಶಿಕ್ಷಣ ನೀಡುತ್ತಲೇ ಹಲವರ ಪ್ರೀತಿಗೂ ಪಾತ್ರರಾಗಿದ್ದರು.
ನಗರದ ಜೆಪ್ಪುವಿನ ಯೆನೆಪೊಯ ಕ್ಲಸ್ಟರ್ನಲ್ಲಿ ವಾಸವಾಗಿದ್ದ ಮುಹಮ್ಮದ್ ಮುಸ್ಲಿಯಾರ್ ಪತ್ನಿ, ಇಬ್ಬರು ಪುತ್ರರು ಹಾಗೂ ಆರು ಮಂದಿ ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story