ಬಿವಿಟಿಯಲ್ಲಿ ಕೈತೋಟ, ತರಕಾರಿ ಕೃಷಿ ಮಾಹಿತಿ ಶಿಬಿರ
ಉಡುಪಿ, ಮೇ 16: ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಮೇ 22ರ ಮಂಗಳವಾರ ಬೆಳಿಗ್ಗೆ 9:30ರಿಂದ ಒಂದು ದಿನದ ತರಕಾರಿ ಕೃಷಿಯ ಬಗ್ಗೆ ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮನೆಯ ಕೈತೋಟದಲ್ಲಿ ತರಕಾರಿ ಬೆಳೆಯುವುದರಿಂದ ತಾಜಾ ತರಕಾರಿ ಲ್ಯವಾಗುದಲ್ಲದೇ, ಹೆಚ್ಚುವರಿ ತರಕಾರಿ ಯನ್ನು ಮಾರಾಟ ವಾಡಿ ಆದಾಯ ಗಳಿಸಲೂ ಅವಕಾಶಗಳಿವೆ.
ಈ ಮಾಹಿತಿ ಶಿಬಿರದಲ್ಲಿ ಮನೆಯಂಗಳ ಅಥವಾ ತಾರಸಿ ಮೇಲೆ ಸುಲಭ ವಾಗಿ ತರಕಾರಿ ಕೈತೋಟ ಮಾಡಲು ಇಲ್ಲಿಯ ಪರಿಸರಕ್ಕೆ ಸೂಕ್ತವಾದ ತರಕಾರಿ ಗಿಡಗಳ ಆಯ್ಕೆ, ಕಂಪೋಸ್ಟ್ ಗೊಬ್ಬರ ತಯಾರಿ, ಸುಲಭ ರೀತಿಯಲ್ಲಿ ರೋಗ ನಿವಾರಣೆ ಇತ್ಯಾದಿ ವಿಷಯಗಳ ಬಗ್ಗೆ ಕೃಷಿ ವಿಜ್ಞಾನಿ ವೈಕುಂಠ ಹೇರ್ಳೆ, ಕೆ.ವಿ.ಕೆ ಯ ಕೃಷಿ ತಜ್ಞರಾದ ಡಾ. ಧನಂಜಯ ಮತ್ತು ಡಾ.ಚೈತನ್ಯ ಮಾಹಿತಿಗಳನ್ನು ನೀಡಲಿದ್ದಾರೆ. ತರಬೇತಿ ಕೊನೆಯಲ್ಲಿ ತರಕಾರಿ ಬೀಜಗಳನ್ನು ಉಚಿತವಾಗಿ ವಿತರಿಸಲಾಗುವುದು.
ಈ ತರಬೇತಿಯಲ್ಲಿ ಎಲ್ಲಾ ವಯೋಮಿತಿಯ ಆಸಕ್ತ ಪುರುಷರು, ಮಹಿಳೆ ಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು. ಆಸಕ್ತರು ತಮ್ಮ ಭಾಗವಹಿಸುವಿಕೆ ಯನ್ನು ಭಾರತೀಯ ವಿಕಾಸ ಟ್ರಸ್ಟ್, ಅನಂತ, ಮಣಿಪಾಲ ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ ಉಡುಪಿ- 576102, ದೂರವಾಣಿ ಸಂಖ್ಯೆ: 0820-2570263 ಸಂಪರ್ಕಿಸುವ ಮೂಲಕ ದೃಢೀಕರಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.