ಅನಗತ್ಯ ಕೇರಳ ಭೇಟಿ ಮುಂದೂಡಿ: ನಾಗರಿಕರಿಗೆ ಯುಎಇ ಸೂಚನೆ
ದುಬೈ, ಮೇ 25: ನಿಪಾಹ್ ಜ್ವರ ಹರಡಿರುವ ಕೇರಳಕ್ಕೆ ನೀಡುವ ಅನಗತ್ಯ ಭೇಟಿಯನ್ನು ಮುಂದೂಡುವಂತೆ ಯುಎಇ ತನ್ನ ನಾಗರಿಕರಿಗೆ ಸೂಚನೆ ನೀಡಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕೇರಳದಲ್ಲಿ ನಿಪಾಹ್ ಜ್ವರವು ಈಗಾಗಲೇ 11 ಮಂದಿಯನ್ನು ಬಲಿ ತೆಗೆದುಕೊಂಡಿದೆ ಹಾಗೂ ಕನಿಷ್ಠ 40 ಮಂದಿಯಲ್ಲಿ ಈ ಜ್ವರದ ಲಕ್ಷಣಗಳು ಪತ್ತೆಯಾಗಿವೆ.
ಕೇರಳದಲ್ಲಿನ ಪರಿಸ್ಥಿತಿಯ ಬಗ್ಗೆ ತಾನು ನಿಕಟ ನಿಗಾ ಇರಿಸಿರುವುದಾಗಿ ಆರೋಗ್ಯ ಸಚಿವಾಲಯವು ತಿಳಿಸಿದೆ.
‘‘ನಿಪಾಹ್ ವೈರಸ್ ಪ್ರಕರಣಗಳು ಯುಎಇಗೆ ಆಮದಾಗುವ ಅಪಾಯವನ್ನು ಅಂದಾಜಿಸಲು ಹಾಗೂ ಅಗತ್ಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲು ಸಚಿವಾಲಯವು ಸಂಬಂಧಪಟ್ಟ ಪ್ರಾಧಿಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ಅದೇ ವೇಳೆ, ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ’’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Next Story