ಜೂ. 2: ಡಿ.ಕೆ.ಎಸ್.ಸಿ ಅಬುಧಾಬಿ ಇಫ್ತಾರ್, ಬದ್ರ್ ಅನುಸ್ಮರಣೆ
ಶೈಖುನಾ ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ರಿಗೆ ಸನ್ಮಾನ
ಅಬುಧಾಬಿ, ಮೇ 30: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ಅಬುಧಾಬಿ ಯುನಿಟ್ ಇದರ ವತಿಯಿಂದ ಬ್ರಹತ್ ಇಪ್ತಾರ್ ಕೂಟ ಹಾಗೂ ಬದರ್ ಅನುಸ್ಮರಣೆಯು ಜೂ 2 ರಂದು ಸಂಜೆ 5 ಗಂಟೆಗೆ ಅಬುಧಾಬಿ ಮದೀನತ್ಝಯಿದ್ ಸೊಪಿಂಗ್ ಸೆಂಟರ್ ಲೂಲು ಪಾರ್ಟಿ ಹಾಲ್ ನಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಗೌರವಾಧ್ಯಕ್ಷ ಸಯ್ಯದ್ ತ್ವಾಹ ಭಾಪಕಿ ತಂಘಳ್ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ದುಬೈ ಅಂತಾರಾಷ್ಟ್ರೀಯ ಹೋಲಿ ಖುರ್ ಆನ್ ಅವಾರ್ಡ್ ಪ್ರಭಾಷಣ ಕಾರ್ಯಕ್ರಮಕ್ಕೆ ಜಾಮಿಯಾ ಸಅದಿಯ ಅರೇಬಿಯಾ ಇದರ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಅಧೀನಸಂಸ್ಥೆ ಯಾದ ಅಲ್ ಇಹ್ಸಾನ್ ಶರಿಯತ್ ಕಾಲೇಜು ಇದರ ಗೌರವಾನ್ವಿತ ಪ್ರಾಂಶುಪಾಲರಾದ ಶೈಖುನಾ ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ರವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು ಅವರನ್ನು ಡಿ.ಕೆ.ಎಸ್.ಸಿ.ಯು.ಎ.ಇ. ರಾಷ್ಟೀಯ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮವು ನಡೆಯಲಿದೆ ಎಂದು ಸ್ವಾಗತ ಸಮಿತಿ ಚೆಯರ್ಮೆನ್ ಹಾಜಿ ಶೇಖ್ ಬಾವ ಮಂಗಳೂರು, ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟೀಯ ಸಮಿತಿ ಅಧ್ಯಕ್ಷ ಹಾಜಿ ಇಕ್ಬಾಲ್ ಕಣ್ಣಂಗಾರ್, ಡಿ.ಕೆ.ಎಸ್.ಸಿ ಅಬುಧಾಬಿ ಯುನಿಟ್ ಅಧ್ಯಕ್ಷ ಇಕ್ಬಾಲ್ ಕುಂದಾಪುರ ಹಾಗೂ ಸದ್ಯಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.