ಘರ್ವಾಪ್ಸಿಯನ್ನು ಸಮರ್ಥಿಸಲು ಗೋಳ್ವಾಲ್ಕರ್, ನೆಹರೂರವರ ಮಾತುಗಳನ್ನು ತಪ್ಪಾಗಿ ಅರ್ಥೈಸಿದ್ದು ಹೇಗೆ?
ಭಾಗ-2
ಭಾರತದಲ್ಲಿ ಯಾವುದೇ ಒಂದು ಸಮುದಾಯವು ಭಾರತದ ಹೃದಯ ಮತ್ತು ತತ್ವ ಜ್ಞಾನದ ಮೇಲೆ ಸರ್ವಸ್ವಾಮ್ಯ ಸ್ಥಾಪಿಸಲು ಸಾಧ್ಯವಿಲ್ಲ.ಭಾರತದಲ್ಲಿ ಏನೇನಿದೆಯೋ, ಅದರ ಸೃಷ್ಟಿಗೆ ಪ್ರತಿಯೊಬ್ಬ ಭಾರತೀಯನೂ ತನ್ನ ಕಾಣಿಕೆ ಸಲ್ಲಿಸಿದ್ದಾನೆ. ನಾವು ಈ ಮೂಲಭೂತವಾದ ವಿಷಯವನ್ನು ಅರ್ಥಮಾಡಿಕೊಳ್ಳದಿದ್ದಲ್ಲಿ, ನಾವು ಭಾರತೀಯರನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತೇವೆ ಮತ್ತು ನಾವು ಭಾರತವನ್ನು ಅರ್ಥಮಾಡಿಕೊಳ್ಳದಿದ್ದಲ್ಲಿ ನಮ್ಮ ಯೋಚನೆಗಳು,ತತ್ವಜ್ಞಾನ ಮತ್ತು ಕ್ರಿಯೆಗಳು ಅರೆ ಬೆಂದವುಗಳಾಗಿರುತ್ತವೆ.
‘‘ಶತಮಾನಗಳಿಂದ ಧಾರ್ಮಿಕ ಗುಲಾಮಗಿರಿಯಲ್ಲಿ ಬಳಲುತ್ತಿರುವ ಈ ಹತಾಶ, ಪರಿತ್ಯಕ್ತ ಸಹೋದರರನ್ನು (ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನರನ್ನು) ಅವರ ಪೂರ್ವಜರ ಮನೆಗಳಿಗೆ ಮರಳಿ ಕರೆತರುವುದು ನಮ್ಮ ಕರ್ತವ್ಯ ಎಂದು ಗೋಲ್ವಾಲ್ಕರ್ ಘೋಷಿಸುತ್ತಾರೆ.’’
ಘರ್ವಾಪ್ಸಿ ಒಂದು ಯೋಜನೆ (ಪ್ರಾಜೆಕ್ಟ್)ಯಾಗಿ ಇಂದು ಬೆಳೆದಿರುವ ಚಳವಳಿಯ/ಅಭಿಯಾನದ ಬೀಜ ಇಲ್ಲಿದೆ. ಮುಸ್ಲಿಮರು ಕೂಡ ಹಿಂದೂಗಳು ಎಂದು ಇಂದಿನ ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಆಗಾಗ್ಗೆ ಹೇಳುತ್ತಿರುವುದಕ್ಕೂ ಇದೇ ಕಾರಣ.
ಭಾಗವತ್ರವರು ‘ಬಂಚ್ ಆಫ್ ಥಾಟ್ಸ್’ನಲ್ಲಿ ವ್ಯಕ್ತವಾಗಿರುವ ವಿಚಾರಗಳನ್ನೇ ಪ್ರತಿಧ್ವನಿಸುತ್ತಿದ್ದಾರೆ. ಉದಾಹರಣೆಗೆ, ‘‘ಪರಕರ್ಮವಾದ್’’ ಅಥವಾ‘‘ಅಸಿಮಿಲೇಶನಿಸಮ್’’ ಮೂಲಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹಿಂದೂ ಜೀವನ ವಿಧಾನವನ್ನು ಆಲಿಂಗಿಸಿಕೊಳ್ಳುವಂತೆ ಮಾಡಬಹುದು, ಎನ್ನುತ್ತಾರೆ ಗೋಳ್ವಾಲ್ಕರ್. ತನ್ನ ಈ ಯೋಜನೆಯನ್ನು ಸಮರ್ಥಿಸಲು ಅವರು ನೆಹರೂರವರನ್ನು ಉಲ್ಲೇಖಿಸಿ, ನೆಹರೂರವರು ಎಂದೂ ನೀಡಿರದಿದ್ದ ಹೇಳಿಕೆಗಳನ್ನು ನೆಹರೂರವರು ನೀಡಿದ್ದರು ಎಂದು ಹೇಳುತ್ತಾರೆ.
ಕವಿ ರಾಮ್ಧಾರಿ ಸಿಂಗ್ ದಿನಕರನ್ರವರ ‘ಸಂಸ್ಕೃತಿ ಕೇ ಚಾರ್ ಅಧ್ಯಾಯ್’ ಎಂಬ ಕೃತಿಗೆ ನೆಹರೂ ಬರೆದಿರುವ ಮುನ್ನುಡಿಯಲ್ಲಿ, ಹಿಂದೂ ಸಂಸ್ಕೃತಿಯ ವಿಕಾಸದಲ್ಲಿ ಎರಡು ಹಂತಗಳಿದ್ದವು ಎಂದು ಅವರು ಹೇಳುತ್ತಾರೆ. ಮೊದಲ ಹಂತದಲ್ಲಿ, ಹೂಣರು ಮತ್ತು ಶಖರಂತಹ ವಿದೇಶೀ ದಾಳಿಕೋರರು ಭಾರತಕ್ಕೆ ಒಂದು ತಮ್ಮ ಪದ್ಧತಿಗಳನ್ನು ಹಾಗೂ ಧರ್ಮ/ನಂಬಿಕೆಗಳನ್ನು ತ್ಯಜಿಸಿ ತಮ್ಮನ್ನು ರಜಪೂತರು ಎಂದು ಕರೆದುಕೊಳ್ಳಲಾರಂಭಿಸಿದರು. ‘‘ಅವರೆಲ್ಲರೂ ನಮ್ಮ ಧರ್ಮದಲ್ಲಿ ಸಂತೋಷದಿಂದ ಸ್ವಯಂಸ್ಫೂರ್ತಿಯಿಂದ ವಿಲೀನಗೊಂಡರು,(ನಮ್ಮ ಧರ್ಮವನ್ನು ಅಪ್ಪಿಕೊಂಡರು) ಎನ್ನುತ್ತಾರೆ ಗೋಳ್ವಾಲ್ಕರ್,- ನೆಹರೂರವರ ಮಾತುಗಳನ್ನು ಸಂಗ್ರಹಿಸಿ ಹೇಳುವ ರೀತಿಯಲ್ಲಿ ‘‘ ಆಮೇಲೆ, ಅವರು (ನೆಹರೂ) ಹೇಳುತ್ತಾರೆ, ದ್ವೇಷಿಸುವ ಸ್ವಭಾವದ ದಾಳಿಕೋರರು ನಮ್ಮ ದೇಶದ ಮೇಲೆ ದಾಳಿ ನಡೆಸಿದಾಗ ಎರಡನೆಯ ಹಂತ ಬಂತು; ಮತ್ತು ಆಗ ನಮ್ಮ ಜನರು, ತಮ್ಮ ಸಮನೀಯವಲ್ಲದ(ರಿಜಿಡ್) ಸಾಮಾಜಿಕ ಚೌಕಟ್ಟಿನಲ್ಲಿ ರಕ್ಷಣೆ ಬಯಸಿ, ಮಾಡು ಮತ್ತು ಮಾಡಬೇಡ ಎಂಬ ನಿಯಮಗಳ ಹಿಂದೆ ತಮ್ಮನ್ನು ತಾವೇ ಕೂಡಿಹಾಕಿಕೊಂಡರು. ಹೀಗೆ ಅವರು, ಎಲ್ಲರಿಂದ ದೂರುಉಳಿದು ಸಂಕುಚಿತ ಮನಸ್ಸಿನವರಾದರು.’’
ಈ ಹಂತವನ್ನು ಗೋಳ್ವಾಲ್ಕರ್ ‘ಸಂಕುಚಿತ ವಾದ್’ ಅಥವಾ ‘‘ಕಾಂಟ್ರಾಕ್ಷನಿಸಮ್’’ಎಂದು ಕರೆಯುತ್ತಾರೆ. ಮೂರನೆಯ ಒಂದು ಹಂತವೂ ಇತ್ತು, ಎನ್ನುತ್ತಾರೆ ಅವರು. ಆದರೆ, ದುರದೃಷ್ಟವಶಾತ್ ನೆಹರೂ ಆ ಹಂತವನ್ನು ಗುರುತಿಸಿರಲೇ ಇಲ್ಲ ಅದು ‘‘ ಶರಣ್ಗತಿವಾದ್’’ ಅಥವಾ ‘‘ ಸರೆಂಡರಿಸಮ್’’ (ಶರಣಾಗತ ವಾದ); ಈ ಹಂತದಲ್ಲಿ ಹಿಂದೂಗಳು ದಾಳಿಕೋರರ ಕ್ರಮ ಸಂಪ್ರದಾಯಗಳನ್ನು ಅನುಸರಿಸಲಾರಂಭಿಸಿದರು.
‘ಸಂಸ್ಕೃತಿ’ಗೆ ನೆಹರೂರವರು ಬರೆದಿರುವ ಮುನ್ನುಡಿಯನ್ನು ಮೇಲುಮೇಲೆ ಓದಿದರೂ ಸಾಕು; ಗೋಳ್ವಾಲ್ಕರ್ ನೆಹರೂರವರು ಹೇಳದ ಮಾತುಗಳನ್ನು ತಾನೇ ಸೇರಿಸಿದ್ದಾರೆ ಎಂದು ತಿಳಿದು ಬಿಡುತ್ತದೆ. ಆರಂಭದಲ್ಲೇ ನೆಹರೂ ಬರೆಯುತ್ತಾರೆ; ‘‘ಕೆಲವು ಮಂದಿ ಹಿಂದೂ ಸಂಸ್ಕೃತಿ, ಮುಸ್ಲಿಂ ಸಂಸ್ಕೃತಿ ಮತ್ತು ಕ್ರಿಶ್ಚಿಯನ್ ಸಂಸ್ಕೃತಿಯನ್ನು ಚರ್ಚಿಸುತ್ತಾರೆ. ನನಗೆ ಈ ಶಬ್ದಗಳು ಅರ್ಥವಾಗುವುದಿಲ್ಲ; ರಾಷ್ಟ್ರಗಳ ಹಾಗೂ ಸಮುದಾಯಗಳ ಸಂಸ್ಕೃತಿಯ ಮೇಲೆ ಧಾರ್ಮಿಕ ಚಳವಳಿಗಳು ಪರಿಣಾಮ ಬೀರಿವೆ ಎಂಬುದು ನಿಜ. ಭಾರತವನ್ನು ನೋಡುವಾಗ, ದಿನಕರ್ರವರು ಒತ್ತಿ ಹೇಳುವಂತೆ, ಭಾರತೀಯರ ಸಂಸ್ಕೃತಿ ಸಂಯುಕ್ತ (ಕಾಂಪೋಸಿಟ್), ಮತ್ತು ಅದು ನಿಧಾನವಾಗಿ ಅಭಿವೃದ್ಧಿಯೊಂದಿಗೆ, ಬೆಳೆದುಬಂದಿದೆ ಎಂದು ನನಗನ್ನಿಸ್ತುತದೆ.’’ ‘‘ತನಗೆ ಎದುರಾಗುವ ಹೊಸ ವಿಷಯಗಳನ್ನು, ಸಂಗತಿಗಳನ್ನು, ತನ್ನೊಳಗೆ ಏಕೀಕೃತಗೊಳಿಸುವ ಮತ್ತು ಅಂತರ್ಗತವಾಗಿಸುವ ಭಾರತದ ಸಾಮರ್ಥ್ಯದ ಬಗ್ಗೆ ನೆಹರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಎರಡನೇ ಹಂತದಲ್ಲಿ ‘ದ್ವೇಷ ಸ್ವಭಾವದ ದಾಳಿಕೋರರು’’ ಬಂದರು ಎಂದು ನೆಹರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ (ವಾಚ್ಯವಾಗಿ ಅಥವಾ ಸೂಚ್ಯವಾಗಿ) ಎಂದೂ ಹೇಳುವುದಿಲ್ಲ; ಹೇಳಿಲ್ಲ. ಅವರು ಬರೆಯುವುದಿಷ್ಟೆ: ‘‘ಭಾರತದ ಇತಿಹಾಸದಲ್ಲಿ ಪರಸ್ಪರ ವಿರುದ್ಧವಾದ ಮತ್ತು ಪರಸ್ಪರ ಸ್ಪರ್ಧಿಸುವ ಎರಡು ಶಕ್ತಿಗಳು ಕಾರ್ಯಾಚರಿಸುವುದನ್ನು ನಾವು ಕಾಣುತ್ತೇವೆ. ಹೊರಗಿನ ಪ್ರಭಾವಗಳನ್ನು ತನ್ನೊಳಗೆ ಮಾಡಿಕೊಳ್ಳುವ ಏಕತೆ ಮತ್ತು ಸಾಮರಸ್ಯವನ್ನು ಸೃಷ್ಟಿಸುವ ಒಂದು ಶಕ್ತಿ, ಮತ್ತು ಇನ್ನೊಂದು, ವಿಭಜನೆಯನ್ನು ಪೋತ್ಸಾಹಿಸುವ, ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸುವ ಪ್ರವೃತ್ತಿಯನ್ನು ಬಲಪಡಿಸುವ ಶಕ್ತಿ. ಆದರೆ ಗೋಳ್ವ್ವಾಲ್ಕರ್ರವರು ವಿಭಜಿಸುವ ಶಕ್ತಿಯನ್ನು ‘‘ದ್ವೇಷಸ್ವಭಾವದ ದಾಳಿ ಕೋರರು’’ ಎಂದು ಅರ್ಥೈಸುತ್ತಾರೆ. ನಿಜವಾಗಿ ನೆಹರೂ ತನ್ನ ಮುನ್ನುಡಿಯನ್ನು ಹೀಗೆ ಸಮಾಪ್ತಿಗೊಳಿಸುತ್ತಾರೆ. ಭಾರತದಲ್ಲಿ ಯಾವುದೇ ಒಂದು ಸಮುದಾಯವು ಭಾರತದ ಹೃದಯ ಮತ್ತು ತತ್ವ ಜ್ಞಾನದ ಮೇಲೆ ಸರ್ವಸ್ವಾಮ್ಯ ಸ್ಥಾಪಿಸಲು ಸಾಧ್ಯವಿಲ್ಲ.ಭಾರತದಲ್ಲಿ ಏನೇನಿದೆಯೋ, ಅದರ ಸೃಷ್ಟಿಗೆ ಪ್ರತಿಯೊಬ್ಬ ಭಾರತೀಯನೂ ತನ್ನ ಕಾಣಿಕೆ ಸಲ್ಲಿಸಿದ್ದಾನೆ. ನಾವು ಈ ಮೂಲಭೂತವಾದ ವಿಷಯವನ್ನು ಅರ್ಥಮಾಡಿಕೊಳ್ಳದಿದ್ದಲ್ಲಿ, ನಾವು ಭಾರತೀಯರನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತೇವೆ ಮತ್ತು ನಾವು ಭಾರತವನ್ನು ಅರ್ಥಮಾಡಿಕೊಳ್ಳದಿದ್ದಲ್ಲಿ ನಮ್ಮ ಯೋಚನೆಗಳು,ತತ್ವಜ್ಞಾನ ಮತ್ತು ಕ್ರಿಯೆಗಳು ಅರೆ ಬೆಂದವುಗಳಾಗಿರುತ್ತವೆ. ಆರೆಸ್ಸೆಸ್, ಗೋಳ್ವಾಲ್ಕರ್ರವರ ತತ್ವಜ್ಞಾನವನ್ನು, ಚಿಂತನಾ ಸರಣಿಯನ್ನು ಗೌರವದಿಂದ ಪೂಜ್ಯಭಾವನೆಯಿಂದ ಕಾಣುತ್ತಿದೆಂಬುದು ಸ್ಪಷ್ಟ. ಆದರೆ ಕಾಂಗ್ರೆಸ್ ಮುಖ್ಯಸ್ಥ (ರಾಹುಲ್ಗಾಂಧಿ), ಆರೆಸ್ಸೆಸ್ ಗಾಂಧೀಜಿಯವರನ್ನು ಹತ್ಯೆ ಮಾಡಿತೆಂದು ಆಪಾದಿಸಿದಾಗ ಆರೆಸ್ಸೆಸ್ ರಾಹುಲ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ಹಾಗೆ, ಈಗ ರಾಹುಲ್ ಗಾಂಧಿಯವರು ಬಂಚ್ಆಫ್ ಥಾಟ್ಸ್ ನಿಂದ ನೆಹರೂರವರು ಹೇಳದೇ ಇದ್ದ ಮಾತುಗಳನ್ನು ಕಿತ್ತುಹಾಕಬೇಕೆಂದು ನ್ಯಾಯಾಂಗಕ್ಕೆ ಅರ್ಜಿ ಸಲ್ಲಿಸಿದಲ್ಲಿ ಅವರು ಖಂಡಿತವಾಗಿಯೂ ದೃಢವಾದ ನೆಲೆಯಲ್ಲಿ ನಿಂತಿರುತ್ತಾರೆ.