ತೋಡಿಗೆ ಬಿದ್ದು ಕೃಷಿಕ ಮೃತ್ಯು
ಕೋಟ, ಜೂ.18: ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ಜೂ.17ರಂದು ಬೆಳಗ್ಗೆ ಶಿರಿಯಾರ ಗ್ರಾಮದ ಕೊಳ್ಕೆಬೈಲು ಎಂಬಲ್ಲಿ ನಡೆದಿದೆ.
ಮೃತರನ್ನು ದಿನೇಶ(35) ಎಂದು ಗುರುತಿಸಲಾಗಿದೆ. ಇವರು ಮನೆಯಿಂದ ಗೊಬ್ಬರವನ್ನು ಬುಟ್ಟಿಯಲ್ಲಿ ತಲೆಯ ಮೇಲೆ ಹೊತ್ತುಕೊಂಡು ಗದ್ದೆಗೆ ಹೋಗು ತ್ತಿರುವಾಗ ದಾರಿ ಮಧ್ಯೆ ನೀರು ತುಂಬಿದ ತೋಡಿನ ಸಂಕದ ಮೇಲಿಂದ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story