ಸಾರಥಿ ನಂ.1 ಪ್ರಶಸ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜೂ.18: ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ವತಿಯಿಂದ ಅಪಘಾತರಹಿತ ಚಾಲಕರಿಗೆ ನೀಡುವ ಸಾರಥಿ ನಂ.1 ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬಸ್ಸು, ಲಾರಿ, ಕ್ಯಾಬ್, ಆಟೋ, ಟ್ರಾಕ್ಟರ್, ಅಗ್ನಿಶಾಮಕ, ಕ್ರೇನ್ ಹಾಗೂ ಸರಕಾರಿ ಮತ್ತು ಖಾಸಗಿ ವಾಹನ ಚಾಲಕರು ಅಪಘಾತ ರಹಿತ, ಚಾಲನ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಗಂಡಸಿ ಸದಾನಂದ ಸ್ವಾಮಿ, ಅಧ್ಯಕ್ಷರು ಭಾರತ ಸಾರಥಿ, ನಂ.1301, ಪುಟ್ಟಣ್ಣ ಪ್ಲಾಜ, 25 ನೆ ಮುಖ್ಯರಸ್ತೆ, ಜಯನಗರ 9 ನೆ ಬ್ಲಾಕ್, ಬೆಂಗಳೂರು-560 069 ಇಲ್ಲಿಗೆ ಜು.5 ರೊಳಗೆ ಸಲ್ಲಿಸಬೇಕು. ಜು.28 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story