ಜೋಯಾಲುಕ್ಕಾಸ್ ಆಭರಣ ಮಳಿಗೆಯಲ್ಲಿ ರಕ್ತದಾನ ಶಿಬಿರ
ಮಂಗಳೂರು, ಜೂ.18: ನಗರದ ಫಳ್ನೀರ್ನಲ್ಲಿರುವ ಜೋಯಾಲುಕ್ಕಾಸ್ ಆಭರಣ ಮಳಿಗೆಯಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಹಯೋಗದೊಂದಿಗೆ ಇಂದು ರಕ್ತ ದಾನ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಪಾಧ್ಯಕ್ಷ ಹಾಗೂ ಬ್ಲಡ್ ಬ್ಯಾಂಕ್ನ ಅಧ್ಯಕ್ಷ ಡಾ.ಸುಶೀಲ್ ಜತ್ತನ್ನ, ಬ್ಲಡ್ ಬ್ಯಾಂಕ್ನ ತಾಂತ್ರಿಕ ಮೇಲ್ವಿಚಾರಕ ಎಡ್ವರ್ಡ್ ವಾಸ್, ಆರ್ಯಯಾನೆ ಮರಾಠ ಸಂಘದ ರಾಜೇಶ್ ರಾವ್ ಪಾಟೀಲ್, ಪಳ್ನಿರ್ ಜೋಯಾಲುಕ್ಕಾಸ್ ಆಭರಣ ಮಳಿಗೆಯ ಬ್ರಾಂಚ್ ಮ್ಯಾನೇಜರ್ ಹರೀಶ್ ಪಿ.ಎಸ್, ಸಹಾಯಕ ವ್ಯವಸ್ಥಾಪಕ ವೀರೇಂದ್ರ ಮೊದಲಾದವರು ಉಪಸ್ಥಿತರಿದ್ದರು.
Next Story