ಉತ್ತರ ಪ್ರದೇಶ: ಜಾನುವಾರು ಕಳ್ಳತನದ ಶಂಕೆಯಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ
ಉತ್ತರ ಪ್ರದೇಶ, ಜೂ.19: ಜಾನುವಾರು ಕಳ್ಳತನದ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಪೊಂದು ಥಳಿಸಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಹಾಪುರ್ ನ ಪಿಲ್ಖುವಾದಲ್ಲಿ ನಡೆದಿದೆ.
ತನ್ನ ಹೊಲಕ್ಕೆ ನುಗ್ಗಿದ್ದ ಎಮ್ಮೆ ಹಾಗು ಆಕಳನ್ನು ಕಾಸಿಮ್ ಹಾಗು ಅವರ ಸ್ನೇಹಿತ ಹೊಲದಿಂದ ಹೊರಕ್ಕೆ ಅಟ್ಟಿದ್ದರು. ಆದರೆ ಜಾನುವಾರು ಕಳ್ಳರೆಂಬ ಶಂಕೆಯಲ್ಲಿ ಗುಂಪೊಂದು ಅಮಾನವೀಯವಾಗಿ ಥಳಿಸಿ ಕಾಸಿಮ್ ರನ್ನು ಹತ್ಯೆಗೈದಿದೆ.
ಕಾಸಿಮ್ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾಸಿಮ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ.
ಕಾಸಿಮ್ ಗೆ ಗುಂಪು ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದಯವಿಟ್ಟು ನನಗೆ ನೀರು ಕೊಡಿ ಎಂದು ಕಾಸಿಮ್ ಕೇಳುತ್ತಿರುವುದು ವಿಡಿಯೋದಲ್ಲಿದೆ.
Next Story