ವಿಎಚ್ಪಿ ಮಹಿಳಾ ಪ್ರಮುಖ್ ಆಶಾ ಜಗದೀಶ್ ಹೇಳಿಕೆ: ದ.ಕ.ಜಿಲ್ಲಾ ಎಸ್ಎಫ್ಐ ಖಂಡನೆ
ಮಂಗಳೂರು, ಜೂ.19: ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಎಚ್ ಪ್ರಮುಖ್ ಆಶಾ ಜಗದೀಶ್ ನೀಡಿದ ಹೇಳಿಕೆಯನ್ನು ಎಸ್ಎಫ್ಐ ದ.ಕ ಜಿಲ್ಲಾ ಸಮಿತಿಯು ಖಂಡಿಸಿದೆ.
‘ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಅನೈತಿಕ ಪೊಲೀಸ್ಗಿರಿ ಮುಂದುವರಿಸಿದರೆ ವಿದ್ಯಾರ್ಥಿಗಳು ಖಂಡಿತವಾಗಿಯೂ ನಿಮ್ಮ ವಿರುದ್ಧ ಧ್ವನಿ ಎತ್ತುತ್ತಾರೆ. ಮಹಿಳೆಯಾಗಿ ಮಹಿಳೆಯರ ಮೇಲೆ ದಾಳಿ ಮಾಡುತ್ತೇವೆ ಎನ್ನಲು ಆಶಾ ಅವರಿಗೆ ನಾಚಿಕೆ ಆಗಬೇಕು. ಭಾರತದ ಪ್ರಜಾಪ್ರಭುತ್ವವು ಯಾರ ಸ್ವಾತಂತ್ರ್ಯವನ್ನು ಯಾರಿಗೂ ಕಸಿಯಲು ಅವಕಾಶ ಕೊಟ್ಟಿಲ್ಲ ಎಂದು ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ ಪ್ರಕಟನೆಯಲ್ಲಿ ತಿಳಿಸಿದರು.
Next Story