ರಾಹುಲ್ ಗಾಂಧಿ ಜನ್ಮ ದಿನಾಚರಣೆ: ವೆನ್ಲಾಕ್ ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ
ಮಂಗಳೂರು, ಜೂ. 19: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಮಿಥುನ್ ರೈಯವರ ನೇತೃತ್ವದಲ್ಲಿ ವೆನ್ಲಾಕ್ ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಿ ಆಚರಿಸಲಾಯಿತು.
ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಬುಡ್ಲೆಗುತ್ತು, ವರುಣ್ ಅಂಬಾಟ್, ಕಾರ್ಯದರ್ಶಿಗಳಾದ ನಾಸಿರ್ ಸಾಮನಿಗೆ, ಸೌಹಾನ್, ಲಾರೆನ್ಸ್ ಡಿಸೋಜ, ಶಬೀರ್ ಕೆಂಪಿ, ಶರೀಫ್ ಕಂಠಿ, ಲಕ್ಷ್ಮಣ ಶೆಣೈ, ವಿಧಾನಸಭಾ ಅಧ್ಯಕ್ಷರುಗಳಾದ ಗಿರೀಶ್ ಆಳ್ವ, ಸಿದ್ದೀಕ್ ಕೊಕ್ಕೊ, ಯು.ಟಿ ತೌಸಿಫ್, ಉಪಾಧ್ಯಕ್ಷರಾದ ರಮಾನಂದ ಪೂಜಾರಿ, ಶಾಫಿ ಕೊತ್ತೆಮೊಟ್ಟೆ, ಚಿತ್ತರಂಜನ್ ಶೆಟ್ಟಿ, ಸರ್ಫರಾಝ್, ಅಬುಸಮೀರ್, ಮಂಗಳೂರು ಸಿಟಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಗಿರಿಶ್ ಶೆಟ್ಟಿ, ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯ ತನ್ಸಿಫ್ ಬೆಳ್ತಂಗಡಿ, ಕಚೇರಿ ಕಾರ್ಯದರ್ಶಿ ಅನ್ಸಾರುದ್ದೀನ್ ಸಾಲ್ಮರ ಉಪಸ್ಥಿತಿಯಿದ್ದರು.
Next Story