ಸಚಿವ ಖಾದರ್ಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನ
ಮಂಗಳೂರು, ಜೂ.19: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ನೂತನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಚಿವ ಖಾದರ್ ಯಾವುದೇ ಜಾತಿ, ಧರ್ಮ ಮರೆತು ಸಮಾಜದ ಶ್ರೇಯಸ್ಸಿಗಾಗಿ ಎಲ್ಲರ ವಿಶ್ವಾಸ ಪಡೆದುಕೊಂಡು ಆಡಳಿತ ನಿರ್ವಹಿಸುವೆ. ಬಲಿಷ್ಠ ಭಾರತದ ನವ ನಿರ್ಮಾಣಕ್ಕಾಗಿ ಎಲ್ಲರೂ ಸೌಹಾರ್ದತೆಯಿಂದ ಬದುಕುವ ಸಂಪ್ರದಾಯ ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದರು.
ಸಚಿವರ ಕಾರ್ಯವೈಖರಿಯ ಬಗ್ಗೆ ಮಾಜಿ ಶಾಸಕ ಜೆ.ಆರ್.ಲೋಬೊ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಶ್ಲಾಘಿಸಿದರು. ಈ ಸಂದರ್ಭ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ದಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್, ಮಾಜಿ ಮೇಯರ್ಗಳಾದ ಅಜಿತ್ ಕುಮಾರ್, ಅಬ್ದುಲ್ ಅಝೀಝ್, ಪಕ್ಷದ ಮುಖಂಡರಾದ ಸಂತೋಷ್ ಶೆಟ್ಟಿ, ನಝೀರ್ ಬಜಾಲ್, ಸಂಶುದ್ದೀನ್, ಶಶಿರಾಜ್ ಅಂಬಟ್, ಮರಿಯಮ್ಮ ಥಾಮಸ್, ನೀರಜ್ಪಾಲ್, ರಘುರಾಜ್ ಕದ್ರಿ, ಮಿಥುನ್ ಕುಮಾರ್, ಮುಸ್ತಫ, ಮೋಹನ್ ಮೆಂಡನ್, ಪಾಲಿಕೆ ಸದಸ್ಯರಾದ ಅಶೋಕ್ ಡಿ.ಕೆ., ರಜನೀಶ್,ನಾಗವೇಣಿ, ಕೇಶವ ಮರೋಳಿ, ಅಖಿಲಾ ಆಳ್ವ, ಸಬಿತಾ ಮಿಸ್ಕಿತ್, ಪ್ರಕಾಶ್ ಬಿ. ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.ಚೇತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.