ಸರಕಾರಿ ಬಾವಿಯ ದುರವಸ್ಥೆ
ಮಾನ್ಯರೇ,
ಹಳೆಯಂಗಡಿ ಕದಿಕೆ ದರ್ಗಾ ವಠಾರದ ಸಾರ್ವಜನಿಕ ಸರಕಾರಿ ಬಾವಿ ಕಳೆದ ಕೆಲವು ವರ್ಷಗಳಿಂದ ಬಿರುಕು ಬಿದ್ದು ಈಗ ಸಂಪೂರ್ಣ ಶಿಥಿಲಗೊಂಡಿದೆ. ಹೀಗಾಗಿ ಸಮೀಪದಲ್ಲಿನ ಮನೆಗಳು ಅಪಾಯದ ಸ್ಥಿತಿಯನ್ನೆದುರಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಹಳೆಯಂಗಡಿ ಗ್ರಾಮ ಪಂಚಾಯತ್ಗೆ ಹಲವಾರು ಬಾರಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಯಾವುದೇ ಅಧಿಕಾರಿಗಳೂ ಸ್ಪಂದಿಸಿಲ್ಲ.
ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿನೀಡಿ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಈ ಭರವಸೆ ಇನ್ನೂ ಕಾರ್ಯಗತವಾಗಿಲ್ಲ. ಈಗ ಮಳೆಗಾಲದಲ್ಲಿ ಈ ಬಾವಿಯ ಸ್ಥಿತಿ ತುಂಬಾ ಅಪಾಯದಲ್ಲಿದೆ. ಹಾಗಾಗಿ ಸಂಬಂಧಪಟ್ಟವರು ಕೂಡಲೇ ಸ್ಪಂದಿಸಬೇಕಾಗಿದೆ. ಇಲ್ಲದಿದ್ದರೆ ಅಪಾಯ ಖಂಡಿತ.
-ಗ್ರಾಮಸ್ಥರು, ಹಳೆಯಂಗಡಿ
Next Story