ನಿವೃತ್ತ ಶಿಕ್ಷಕ ಗೋವಿಂದ ಭಟ್
ಮೂಡುಬಿದಿರೆ, ಆ. 10: ಇಲ್ಲಿನ ಬಾಬು ರಾಜೇಂದ್ರ ಪ್ರೌಢಶಾಲೆಯಲ್ಲಿ ಸುಮಾರು 30 ವರ್ಷಗಳ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆಗೈದು ಉತ್ತಮ ಶಿಕ್ಷಕ ಎಂದು ಹೆಸರಾಗಿದ್ದ ಹವ್ಯಾಸಿ ಯಕ್ಷಗಾನ ಕಲಾವಿದ, ಮಕ್ಕಳ ಕವಿ, ಲೇಖಕ ಅಮ್ಮೆನಡ್ಕ ಗೋವಿಂದ ಭಟ್ (76) ಅಲ್ಪಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಪುತ್ತಿಗೆಯ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮಂಗಳೂರು ಆಕಾಶವಾಣಿಯಲ್ಲಿ ಪ್ರಥಮ ಕಾರ್ಯಕ್ರಮ ನೀಡಿದ ಕಲಾವಿದರಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Next Story