ಕೇರಳ,ಕೊಡಗು ಸಂತ್ರಸ್ಥರಿಗೆ 2 ತಿಂಗಳ ವೇತನ ನೀಡುತ್ತೇನೆ : ಮಾಜಿ ಪ್ರಧಾನಿ ದೇವೇಗೌಡ
ಮೈಸೂರು,ಆ.19: ಕೇರಳ ಮತ್ತು ಕೊಡಗು ಜಿಲ್ಲೆಗಳ ಮಳೆ ಹಾನಿಗೆ ತುತ್ತಾದ ಜನರಿಗೆ ಎರಡು ತಿಂಗಳ ವೇತವನ್ನು ನೀಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿವಾರ ಮೈಸೂರಿಗೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕೇರಳಕ್ಕೆ ಒಂದು ತಿಂಗಳ ವೇತನ ಹಾಗೂ ಕೊಡಗು ಜಿಲ್ಲೆಗೆ ಒಂದು ತಿಂಗಳ ವೇತನ ನೀಡುವುದಾಗಿ ಹೇಳಿದರು. ಹಾಗೂ ಪ್ರವಾಹ ನಿರಾಶ್ರಿತರಿಗೆ ಆಹಾರ, ಸಾಮಾಗ್ರಿಗಳ ಜೊತೆಗೆ ಹಣಕಾಸಿನ ನೆರವು ನೀಡಿದರೆ ಅನುಕೂಲವಾಗಲಿದೆ ಎಂದು ಹೇಳಿದರು.
ಮಳೆಯಿಂದ ತತ್ತರಿಸಿರುವ ಜಿಲ್ಲೆಗಳಿಗೆ ಸಹಾಯ ಮಾಡಲು ಎಲ್ಲರೂ ಮುಂದಾಗಿ ರಾಜ್ಯದ ಮುಖ್ಯಮಂತ್ರಿಗಳ ನಿಧಿಗೆ ಧನ ಸಹಾಯ ನೀಡಬೇಕೆಂದು ಮನವಿ ಮಾಡಿದರು. ಅಲ್ಲದೇ ನನ್ನ 60 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಳೆಯ ಅನಾಹುತವನ್ನು ನೋಡಿರುವುದಾಗಿ ತಿಳಿಸಿದರು.
Next Story