ಆಲಪ್ಪುಳ, ಆ. 19: ಆಲುಪ್ಪುಳದಲ್ಲಿ ನೆರೆಯಲ್ಲಿ ಸಿಲುಕಿದ್ದ ಮಗು ಹಾಗೂ ತಾಯಿಯನ್ನು ಭಾರತೀಯ ವಾಯು ಪಡೆ ರವಿವಾರ ರಕ್ಷಿಸಿದೆ. ಆಲಪ್ಪುಳದ ಮನೆಯ ಟೆರೇಸ್ ಮೇಲೆ ನಿಂತಿದ್ದ ಬಾಲಕ ಹಾಗೂ ಆತನ ತಾಯಿಯನ್ನು ಭಾರತೀಯ ವಾಯು ಪಡೆಯ ಗಾರ್ಡ್ ಸ್ಪೇಷಲ್ ಫೋರ್ಸ್ನ ವಿಂಗ್ ಕಮಾಂಡರ್ ಪ್ರಶಾಂತ್ ರಕ್ಷಿಸುವಲ್ಲಿ ಸಫಲರಾಗಿದ್ದಾರೆ.