ಭೂಕುಸಿತದಿಂದ ಶಿರಾಡ್ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ : ನಾಪತ್ತೆಯಾಗಿದ್ದ ಚಾಲಕನ ಮೃತದೇಹ ಪತ್ತೆ
ಸಕಲೇಶಪುರ, ಆ.19: ಐದು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಶಿರಾಡ್ಘಾಟ್ನ ದೊಡ್ಡತಪ್ಪಲೆ ಗ್ರಾಮದಲ್ಲಿ ಉಂಟಾದ ಭೂಕುಸಿತದಿಂದ ಕಮರಿಗೆ ಉರುಳಿ ನಾಪತ್ತೆಯಾಗಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ಮೃತದೇಹ ರವಿವಾರ ಪತ್ತೆಯಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ಸಂತೋಷ್(32) ಮೃತಪಟ್ಟವರು.
ಭಾರೀ ಮಳೆ ಹಾಗೂ ಟ್ಯಾಂಕರ್ ಬಿದ್ದಿದ್ದ ಕಮರಿನಲ್ಲಿ ಕೆಸರು ನೀರು ಹಾಗೂ ಮರಗಳು ತುಂಬಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ನಿನ್ನೆ ಹಾಗೂ ಇಂದು ಮಳೆ ಬಿಡುವು ಪಡೆದಿರುವುದರಿಂದ ಕಾರ್ಯಾಚರಣೆ ಚುರುಕುಗೊಳಿಸಿದ ತಾಲೂಕು ಆಡಳಿತ ಸಾರ್ವಜನಿಕರ ನೆರವಿನಿಂದ ಮೃತದೇ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.
ಘಾಟ್ನಲ್ಲಿ ಉಂಟಾದ ಭೂಕುಸಿತದಿಂದ ಗ್ಯಾಸ್ ಟ್ಯಾಂಕರ್ ಸುಮಾರು ನೂರು ಅಡಿಯಷ್ಟು ಪ್ರಪಾತಕ್ಕೆ ಉರುಳಿತ್ತು. ಟ್ಯಾಂಕರ್ಕ್ಲೀನರ್ ಬಸವರಾಜ್(38) ಎಂಬವರ ಮೃತದೇಹ ಅಂದೇ ದಿನ ಪತ್ತೆಯಾಗಿತ್ತು. ಸಂತೋಷ್ ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಿರಂತವಾಗಿತ್ತು.
Next Story