ಚಿಲಿಕಾ ಸರೋವರದ ಮೇಲೆ ವಿಮಾನ ಹಾರಿಸಿದ ಒರಿಸ್ಸಾ ಸಿಎಂ: ಪ್ರಕರಣ ದಾಖಲು
ಹೊಸದಿಲ್ಲಿ, ಸೆ. 21: ಚಿಲಿಕಾ ಸರೋವರದ ಮೇಲೆ ವಿಮಾನ ಹಾರಿಸಿದ ಆರೋಪದಲ್ಲಿ ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಬಿಜೆಡಿಯ ನಾಲ್ವರು ಹಿರಿಯ ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜನ್ಸಚೇತನ ನಾಗರಿಕ ಮಂಚದ ಸಂಚಾಲಕ ಪ್ರಿಯದರ್ಶನ್ ಪಟ್ನಾಯಕ್ ಅವರು ಒರಿಸ್ಸಾ ಮುಖ್ಯಮಂತ್ರಿ ವಿರುದ್ಧ ಅರಾಖುಡಾ ಮರೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಥಮ ಮಾಹಿತಿ ವರದಿಯಲ್ಲಿ ಕಂದಾಯ ಸಚಿವ ಮಹೇಶ್ವರ್ ಮೊಹಾಂತಿ, ಕೃಷಿ ಸಚಿವ ಪ್ರದೀಪ್ ಮಹಾರಥಿ, ಪುರಿ ಸಂಸದ ಪಿನಾಕಿ ಮಿಶ್ರಾ ಹಾಗೂ ಶಾಸಕ ಸಂಜಯ್ ದಾಸ್ ಬರ್ಮಾ ಅವರ ಹೆಸರು ಕೂಡ ಇದೆ. ಚಿಲಿಕಾ ನಮ್ಮ ತಾಯಿ. ಕಾನೂನು ಎಲ್ಲರಿಗೂ ಒಂದೇ ಎಂದು ದೂರುದಾರ ಪ್ರಿಯದರ್ಶನ್ ಪಟ್ನಾಯಕ್ ಹೇಳಿದ್ದಾರೆ.
Next Story