ನಾಗಮಂಗಲ: ಅಕ್ರಮ ಕ್ರಷರ್ ಗಳ ಮೇಲೆ ದಾಳಿ; ಜಿಲೆಟಿನ್ ಕಡ್ಡಿ ವಶ, ಇಬ್ಬರ ಬಂಧನ
ನಾಗಮಂಗಲ, ಸೆ.21: ತಾಲೂಕಿನ ಬೆಟ್ಟದ ಮಲ್ಲೇನಹಳ್ಳಿ ಬಳಿ ಪರವಾನಗಿ ಇಲ್ಲದ ಅಕ್ರಮ ಜಲ್ಲಿ ಕ್ರಷರ್ ಮೇಲೆ ದಿಢೀರ್ ದಾಳಿ ಮಾಡಿರುವ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಕ್ರಷರ್ ಮ್ಯಾನೇಜರ್ ಬೆಟ್ಟೆಗೌಡ, ರೈಟರ್ ಮಂಜು ಬಂಧಿತರು. ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ನಾಗಮಂಗಲ ಡೈವೈಎಸ್ಪಿ ಧರ್ಮೇಂದ್ರ ಮತ್ತು ಗ್ರಾಮಾಂತ್ರ ಠಾಣೆ ಎಸ್ಐ ಚಿದಾನಂದ್ ದಾಳಿ ನಡೆಸಿದರು.
ಬಂಧಿತರು ಸೇರಿದಂತೆ, ಕ್ರಷರ್ ಮಾಲಕಿ ಪ್ರೇಮ ಕರೀಗೌಡರ ವಿರುದ್ಧ ಪ್ರಕರಣ ದಾಖಲಾಗದೆ. ಪ್ರೇಮ ಅವರು ಮಾಜಿ ಶಾಸಕ ಚಲುವರಾಯಸ್ವಾಮಿ ಬೆಂಬಲಿಗ ಎಪಿಎಂಸಿ ಮಾಜಿ ಅಧ್ಯಕ್ಷ ಕರೀಗೌಡರ ಪತ್ನಿ ಆಗಿದ್ದಾರೆ.
Next Story