ಮಂಗಳೂರು: ನೂತನ ಎಸಿಪಿಗಳ ನೇಮಕ
ಮಂಗಳೂರು, ಸೆ.23: ನಗರದ ಕೇಂದ್ರ ಮತ್ತು ಉತ್ತರ ಉಪ ವಿಭಾಗಗಳಿಗೆ ನೂತನ ಎಸಿಪಿಗಳನ್ನು ನೇಮಕ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಶನಿವಾರ ಸಂಜೆ ಆದೇಶ ಹೊರಡಿಸಿದೆ.
ಕೇಂದ್ರ ಉಪ ವಿಭಾಗದ ಎಸಿಪಿಯನ್ನಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಜಾಗೃತ ದಳದ ಡಿವೈಎಸ್ಪಿ ಹುದ್ದೆಯಲ್ಲಿದ್ದ ಭಾಸ್ಕರ ಒಕ್ಕಲಿಗ ಅವರನ್ನು ನೇಮಕ ಮಾಡಲಾಗಿದ್ದು, ಕೇಂದ್ರ ಉಪ ವಿಭಾಗದ ಎಸಿಪಿ ಉದಯ ಎಂ. ನಾಯಕ್ ಭಡ್ತಿ ಹೊಂದಿದ್ದು, ವರ್ಗಾವಣೆ ಆದೇಶದಲ್ಲಿದ್ದಾರೆ.
ಉತ್ತರ ಉಪ ವಿಭಾಗದ ಎಸಿಪಿ ಡಿ.ಎಸ್.ರಾಜೇಂದ್ರ ಅವರನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಯಾರನ್ನೂ ನಿಯೋಜಿಸಿಲ್ಲ. ಹುದ್ದೆ ನಿರೀಕ್ಷೆಯಲ್ಲಿದ್ದ ಡಿವೈಎಸ್ಪಿ ಪ್ರವೀಣ್ ಎಚ್.ನಾಯಕ್ ಅವರನ್ನು ಕರಾವಳಿ ಕಾವಲು ಪಡೆಯ ಉಡುಪಿ ಡಿವೈಎಸ್ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
Next Story