ಡಿಸಿಪಿ ಹನುಮಂತರಾಯರ ವರ್ಗಾವಣೆ ರದ್ದು
ಮಂಗಳೂರು, ಸೆ.23: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪಾಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಹನುಮಂತರಾಯ ಅವರ ವರ್ಗಾವಣೆಯನ್ನು ಸರಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಹನುಮಂತರಾಯ ಅವರನ್ನು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯುಕ್ತಿಗೊಳಿಸಿ ಆದೇಶಿಸಲಾಗಿತ್ತು. ಇದೀಗ ಆ ವರ್ಗಾವಣೆಯನ್ನು ರದ್ದುಗೊಳಿಸಿರುವ ಸರಕಾರ ಹಾಲಿ ಸ್ಥಾನದಲ್ಲೇ ಮುಂದುವರಿಸಲು ಸೂಚಿಸಿದೆ.
Next Story