ಸನಾತನ ಧರ್ಮದ ಉಳಿವಿಗಾಗಿ ತನ್ನ ಹೆಸರು ಬದಲಿಸಿದ ಕೇಂದ್ರ ಸಚಿವ !
ಹೊಸದಿಲ್ಲಿ,ಸೆ.25: ಸನಾತನ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತನ್ನ ಹೆಸರಿನ ಮುಂದೆ ಗೋತ್ರವನ್ನು ಸೇರಿಸಿದ್ದು ಇನ್ನು ಮುಂದೆ ತನ್ನನ್ನು ಶಾಂಡಿಲ್ಯ ಗಿರಿರಾಜ್ ಸಿಂಗ್ ಎಂದು ಕರೆಯಬೇಕೆಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಹೇಳಿಕೊಂಡಿರುವ ಸಿಂಗ್ “ಇತರ ಹಿಂದುಗಳು ಕೂಡಾ ತಮ್ಮ ಧರ್ಮವನ್ನು ಉಳಿಸುವ ಸಲುವಾಗಿ ಇದೇ ರೀತಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ದೇಶವನ್ನು ಉಳಿಸಬೇಕಾದರೆ ಸನಾತನವನ್ನು ಉಳಿಸಬೇಕು. ಸನಾತನವನ್ನು ಉಳಿಸಬೇಕಾದರೆ ಋಷಿಮುನಿಗಳು ಮತ್ತು ಸನ್ಯಾಸಿಗಳು ತೋರಿಸಿದ ಮಾರ್ಗದಲ್ಲಿ ನಾವು ನಡೆಯಬೇಕು ಮತ್ತು ನಮ್ಮನ್ನು ನಮ್ಮ ಗೋತ್ರಗಳ ಜೊತೆ ಸೇರಿಸಬೇಕು. ಇಂದಿನಿಂದ ನಾನು ನನ್ನ ಹೆಸರನ್ನು ಶಾಂಡಿಲ್ಯ ಗಿರಿರಾಜ್ ಸಿಂಗ್ ಎಂದು ಬದಲಾಯಿಸುತ್ತೇನೆ. ಎಲ್ಲ ಸನಾತನಿಗಳೂ ತಮ್ಮ ಹೆಸರಿನ ಮುಂದೆ ಗೋತ್ರವನ್ನು ಸೇರಿಸುವಂತೆ ನಾನು ಮನವಿ ಮಾಡುತ್ತೇನೆ” ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಬಿಹಾರದ ನವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಗಿರಿರಾಜ್ ಸಿಂಗ್ ಕೇಂದ್ರ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ರಾಜ್ಯ ಸಚಿವರಾಗಿದ್ದಾರೆ.