ಹನೂರು: ಕೃಷಿ ಪತ್ತಿನ ಸಹಕಾರ ಸಂಘದ ಮಹಾ ಸಭೆ
ಹನೂರು,ಸೆ.25: ಸುಸ್ಥಿದಾರರು ಸಾಲ ಮರುಪಾವತಿ ಮಾಡಿ ಸಾಲ ಮನ್ನಾ ಯೋಜನೆ ಸದುಪಯೊಗಪಡಿಸಿಕೊಳ್ಳಿ ಎಂದು ತಾಪಂ ಮಾಜಿ ಅಧ್ಯಕ್ಷ ಮುರುಡೇಶ್ವರ ತಿಳಿಸಿದರು.
ಸಮೀಪದ ಅಜ್ಜಿಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18 ನೇ ಸಾಲಿನ ಸರ್ವಸದಸ್ಯರ ಮಹಾ ಸಭೆಯಲ್ಲಿ ಅವರು ಮಾತನಾಡಿದರು.
ಸಿದ್ದರಾಮಯಯ್ಯರವರ ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರತಿ ರೈತರಿಗೆ 50 ಸಾವಿರ ರೂ ಮನ್ನಾ ಮಾಡಲಾಯಿತು. ಈಗಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದು, ಸುಸ್ಥಿದಾರರ ರೈತರು ಸಾಲ ಮರುಪಾವತಿ ಮಾಡಿ ಸಾಲ ಋಣ ಮುಕ್ತರಾಗಬೇಕೆಂದು ತಿಳಿಸಿದರು
ಮುಖ್ಯ ಕಾರ್ಯನಿರ್ವಾಹಕ ಅಕಾರಿ ಪ್ರಭಾಕರ್ ರವರು 2017- 18 ನೇ ಸಾಲಿನ ಖರ್ಚು- ವೆಚ್ಚ ಓದಿ ಹೇಳಿದರು. ಸಂಘವು ಕಳೆದ ಸಾಲಿನಲ್ಲಿ 1,67,127 ರೂ. ನಿವ್ವಳ ಲಾಭ ಹೊಂದಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ 2018 ನೇ ಸಾಲಿನ ಆಯವ್ಯಯ ಅಂದಾಜು ಯೋಜನೆಯನ್ನು ಮಂಡಿಸಿ ಸರ್ವ ಸದಸದಸ್ಯರ ಸಮ್ಮುಖದಲ್ಲಿ ಅನುಮೋದನೆ ಪಡೆಯಲಾಯಿತು.
ಈ ಸಂದರ್ಭ ಸಂಘದ ನಿರ್ದೇಶಕರುಗಳು, ಸದಸ್ಯ ರೈತರುಗಳು ಭಾಗವಹಿಸಿದ್ದರು.