ಬಜಾಲ್: ಅಂಗನವಾಡಿ ಕೇಂದ್ರ ಉದ್ಘಾಟನೆ
ಮಂಗಳೂರು, ಅ.11: ಮನಪಾ ಬಜಾಲ್ 53ನೇ ವಾರ್ಡ್ನ ಬಜಾಲ್ನ ಕಲ್ಲಗುಡ್ಡೆ ಪಲ್ಲಕೆರೆ ಅಂಗನವಾಡಿ ಕೇಂದ್ರವನ್ನು ಗುರುವಾರ ಕಾರ್ಪೊರೇಟರ್ ಸುಮ್ಮಯ್ಯ ಆಶ್ರಫ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬಜಾಲ್ 53ನೇ ವಾರ್ಡ್ನ ಕಲ್ಲಗುಡ್ಡೆ ಪಲ್ಲಕೆರೆ ಅಂಗನವಾಡಿ ಕೇಂದ್ರವನ್ನು ಪುನರ್ ನಿರ್ಮಾಣ ಮಾಡುವಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಶ್ರಮಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಜಾಲ್ ವಾರ್ಡ್ನ ಅಧ್ಯಕ್ಷ ಆನಂದ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಶ್ರಫ್ ಬಜಾಲ್, ಹರೀಶ್ ರಾವ್ ಕೋಟೆಕಾರ್, ಆಸಿಫ್ ಬಜಾಲ್, ಮಜೀದ್ ಹಟ್ಟಿ ಬಳ್ಳಿ, ಹಂಝ ಬಜಾಲ್, ಸಮೀರ್ ಬಜಾಲ್, ಹರೀಶ್ ಪೂಜಾರಿ, ಮಹಿಳಾ ಮಂಡಳಿಯ ಅಧ್ಯಕ್ಷೆ ರೇಖಾ ಪ್ರಶಾಂತ್, ಹಿದಯತ್ ಅಟ್ಟಿಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Next Story