ಶಬರಿಮಲೆಗೆ ಹೊರಟ ಪತ್ರಕರ್ತೆ ಮೇಲೆ ಹಲ್ಲೆಗೆ ಯತ್ನ
ತಿರುವನಂತಪುರ,ಅ.17: ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯಕ್ಕೆ ತೆರಳುತ್ತಿದ್ದ ಪತ್ರಕರ್ತೆಯ ಮೇಲೆ ಪ್ರತಿಭಟನೆಕಾರರು ಹಲ್ಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಪೊಲೀಸರು ಮಧ್ಯಪ್ರವೇಶಿಸಿ ಪತ್ರಕರ್ತೆ ಲಿಬಿ ಸಿ.ಎಸ್ ಅವರಿಗೆ ರಕ್ಷಣೆ ನೀಡಿದರು ಎಂದು ತಿಳಿದು ಬಂದಿದೆ.
ಪತ್ರಕರ್ತೆ ಲಿಬಿ ಸಿಎಸ್ ಅವರು ಶಬರಿಮಲೆಗೆ ತೆರಳಲು ಪಟ್ಟಣಂತಿಟ್ಟ ಹೊಸ ಬಸ್ ನಿಲ್ದಾಣಕ್ಕೆ ಬೆಳಗ್ಗೆ ತಲುಪಿದ್ದರು. ಆಗ ಅಲ್ಲಿಗೆ ಆಗಮಿಸಿದ ಪ್ರತಿಭಟನಕಾರರ ಗುಂಪು ಅವರನ್ನು ತಡೆಯಿತು ಎಂದು ತಿಳಿದು ಬಂದಿದೆ.
ನ್ಯೂಸ್ ವೆಬ್ ಸೈಟ್ ಸಂಪಾದಕಿ ಲಿಬಿ ಅವರು ಚೆರ್ತಾಲದಿಂದ ಶಬರಿಮಲೆ ಕ್ಷೇತ್ರಕ್ಕೆ ತೆರಳಲು ಕಪ್ಪು ವಸ್ತ್ರ ಧರಿಸಿ ಇರಿಮುಡಿ ಕಟ್ಟಿಕೊಂಡು ಆಗಮಿಸಿದ್ದರು. ಆದರೆ ಪ್ರತಿಭಟನೆಕಾರರು ಅವರನ್ನು ತಡೆದು ಹಲ್ಲೆಗೆ ಮುಂದಾದರು ಎನ್ನಲಾಗಿದೆ. ಆಗ ಪೊಲೀಸರು ಸ್ಥಳಕ್ಕಾಗಮಿಸಿ ಪತ್ರಕರ್ತೆಗೆ ರಕ್ಷಣೆ ನೀಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story