ನಕಲಿ ಅಂಕಪಟ್ಟಿ ದಂಧೆ: ರಾಜ್ಯ ರೈತ ಸಂಘದ ಅಧ್ಯಕ್ಷ ಸೆರೆ
ಬೆಂಗಳೂರು, ಅ.17: ನಕಲಿ ಅಂಕಪಟ್ಟಿ ಮಾಡುವ ದಂಧೆ ನಡೆಸುತ್ತಿದ್ದ ಆರೋಪದಡಿ ರಾಜ್ಯ ರೈತ ಸಂಘ ಅಧ್ಯಕ್ಷ ಗಿರೀಶ್ ಗೌಡ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದಾರೆ.
ರೈತ ಸಂಘದ ರಾಜ್ಯಾಧ್ಯಕ್ಷರಾಗಿರುವ ಗಿರೀಶ್ ಗೌಡ, ನಕಲಿ ಅಂಕಪಟ್ಟಿ ತಯಾರಿಸುವ ದಂಧೆ ನಡೆಸುತ್ತಿದ್ದು, ತನಗೆ ಗೊತ್ತಿರುವ ನಕಲಿ ಕೋಚಿಂಗ್ ಸೆಂಟರ್ನಲ್ಲಿ ನಕಲಿ ಕೆಎಸ್ಒಯು ಹೆಸರಿನಲ್ಲಿ ಎಜುಕೇಷನ್ ಇನ್ಸ್ಟಿಟ್ಯೂಷನ್ ನಡೆಸುತ್ತಿದ್ದರು ಎನ್ನಲಾಗಿದೆ.
ಭವ್ಯ ಎಂಬಾಕೆಯ ಉಸ್ತುವಾರಿಯಲ್ಲಿ ನಕಲಿ ಅಂಕಪಟ್ಟಿ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ನಾಗರವಾವಿಯ ನಕಲಿ ಎಜುಕೇಷನ್ ಇನ್ಸ್ಟಿಟ್ಯೂಷನ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Next Story