ಉತ್ತರ ಪ್ರದೇಶದಲ್ಲಿ ರೈತನ ಥಳಿಸಿ ಹತ್ಯೆ
ಸಾಂದರ್ಭಿಕ ಚಿತ್ರ
ಮುಝಫ್ಫರ್ನಗರ,ಅ.19: ಇಲ್ಲಿನ ಶಾಮ್ಲಿ ಜಿಲ್ಲೆಯ ಟಿಟೊಲಿ ಗ್ರಾಮದಲ್ಲಿ 65ರ ಹರೆಯದ ರೈತನನ್ನು ದುಷ್ಕರ್ಮಿಗಳು ಥಳಿಸಿ ಹತ್ಯೆ ನಡೆಸಿದ ಘಟನೆ ನಡೆದಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರದಂದು ತನ್ನ ಗದ್ದೆಗೆ ನೀರುಣಿಸಲು ತೆರಳಿದ್ದ ರೈತ ಕರಣ್ ಪಾಲ್ ನಂತರ ಮನೆಗೆ ವಾಪಾಸಾಗಿರಲಿಲ್ಲ. ಮನೆಯವರು ಮತ್ತು ಪೊಲೀಸರು ಹುಡುಕಾಟ ನಡೆಸಿದಾಗ ಅವರ ಮೃತದೇಹವು ಗದ್ದೆಯಲ್ಲಿ ಪತ್ತೆಯಾಗಿದೆ. ದೇಹದ ತುಂಬ ಗಾಯದ ಗುರುತುಗಳಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story