ರಾಹುಲ್ ಈಶ್ವರ್ ಜಾಮೀನು ಅರ್ಜಿ ತಿರಸ್ಕೃತ
ಪತ್ತನಂತಿಟ್ಟ, ಅ.20: ಶಬರಿಮಲೆಯಮಹಿಳಾ ಪ್ರವೇಶಕ್ಕೆ ಸಂಬಂಧಿಸಿ ನಿಲಯ್ಕಲ್ನಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿಸಲಾದ ರಾಹುಲ್ ಈಶ್ವರ್ ಜಾಮೀನು ಅರ್ಜಿಯನ್ನು ಕೋರ್ಟು ತಿರಸ್ಕರಿಸಿದೆ. ಪತ್ತನಂತಿಟ್ಟದ ಪ್ರಥಮ ದರ್ಜೆ ಕೋರ್ಟು ಜಾಮೀನು ಅರ್ಜಿಯಲ್ಲಿ ವಾದ ಆಲಿಕೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿತು. ಘಟನೆಗೆ ಸಂಬಂಧಿಸಿ ರಾಹುಲ್ ಈಶ್ವರ್ ಸಹಿತ 38 ಮಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story