ಕಾರ್ಕಳ: ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಕಾರ್ಕಳ, ಅ.20: ಬೈಲೂರು ಕೌಡುರು ಗ್ರಾಮದ ಶಕ್ತಿ ನಗರ ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ನಾಗೇಶ್ ಪೈ ಎಂಬವರ ಪತ್ನಿ ನಯನ ಪೈ ತನ್ನ ಮಕ್ಕಳ ಜೊತೆ ಕುಲದೇವರ ಪೂಜೆಯ ಹಿನ್ನೆಲೆಯಲ್ಲಿ ಅ.18ರಂದು ಗೋವಾಕ್ಕೆ ತೆರಳಿದ್ದು, ಅ.19ರಂದು ಬೆಳಗ್ಗೆ ವಾಪಾಸ್ಸು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಎದುರು ಬಾಗಿಲಿಗೆ ಹಾಕಿದ ಸೆಂಟ್ರಲ್ ಲಾಕ್ ಮುರಿದು ಒಳನುಗ್ಗಿದ ಕಳ್ಳರು ಕೋಣೆಯ ಕಪಾಟಿನಲ್ಲಿ ಇಟ್ಟಿದ್ದ ಮೂವರೆ ಪವನ್ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ಇದರ ಮೌಲ್ಯ 70ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story