ಕಾಸರಗೋಡು: ಸಹಕಾರಿ ಸಪ್ತಾಹ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಸಿಎಂ ಪಿಣರಾಯಿ ಚಾಲನೆ
ಕಾಸರಗೋಡು, ನ.14: 65ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ರಾಜ್ಯ ಮಟ್ಟದ ಉದ್ಘಾಟನೆ ಇಂದು ಬೆಳಗ್ಗೆ ಕಾಸರಗೋಡಿನಲ್ಲಿ ನಡೆಯಿತು.
ನಗರ ಸಭಾಂಗಣದಲ್ಲಿಂದು ಬೆಳಗ್ಗೆ ನಡೆದ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿ ಸಿದರು.
ಸಹಕಾರಿ ಸಚಿವ ಕಡಗಂಪಳ್ಳಿ ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಕಂದಾಯ ಸಚಿವ ಇ.ಚಂದ್ರಶೇಖರನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು
ಸಪ್ತಾಹದಂಗವಾಗಿ ನಡೆಸಿದ್ದ ರಾಜ್ಯ ಮಟ್ಟದ ಭಾಷಣ ಸ್ಪರ್ಧಾ ವಿಜೇತರಿಗೆ ಇದೇ ಸಂದರ್ಭ ಸಂಸದ ಪಿ.ಕರುಣಾಕರನ್ ಬಹುಮಾನ ವಿತರಿಸಿದರು
ಸಹಕಾರಿ ಸಂಘ ನಡೆಸಿದ ಪರೀಕ್ಷೆಗಳಲ್ಲಿ ರ್ಯಾ೦ಕ್ ಪಡೆದವರನ್ನು ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲ್ ಮತ್ತು ಕೆ.ಕು೦ಞ ರಾಮನ್ ಗೌರವಿಸಿದರು .
ಬಳಿಕ ನಡೆದ ‘ಕೇರಳ ಬ್ಯಾ೦ಕ್ ಪ್ರಾಥಮಿಕ ಸಹಕಾರಿ ಸಂಘಗಳ ಅವಕಾಶಗಳು' ಎಂಬ ವಿಷಯದ ಕಾರ್ಯಾಗಾರವನ್ನು ವಿ.ಎನ್.ಬಾಬು ನಡೆಸಿಕೊಟ್ಟರು. ವಿ.ಜೋಯ್, ರಾಜೇಶ್, ಕಾರಕ್ಕುಳಂ ಕೃಷ್ಣನ್ ಪಿಳ್ಳೆ ಚರ್ಚೆಯಲ್ಲಿ ಭಾಗವಹಿಸಿದರು.
ರಾಜ್ಯದ ವಿವಿದೆಡೆಗಳಿಂದ 2,500 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ
ಚಿತ್ರ ಕಲಾವಿದರ ಸಂಗಮವನ್ನು ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಉದ್ಘಾಟಿಸುವರು. ನವಂಬರ್ 15ರಿಂದ ಜಿಲ್ಲೆಯ ವಿವಿಧೆಡೆ ಸಹಕಾರಿ ಕಾರ್ಯಾಗಾರ ನಡೆಯಲಿದೆ.
ಸಪ್ತಾಹದ ರಾಜ್ಯ ಮಟ್ಟದ ಸಮಾರೋಪ ಕಾರ್ಯಕ್ರಮ ನವಂಬರ್ 20ರಂದು ಕಾಞ೦ಗಾಡ್ ವ್ಯಾಪಾರಿ ಭವನದಲ್ಲಿ ನಡೆಯಲಿದೆ .