ಪತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಮಣಿಪಾಲ, ನ.17: ವೈಯಕ್ತಿಕ ಕಾರಣದಿಂದ ಮನನೊಂದ 80 ಬಡಗು ಬೆಟ್ಟು ರಾಜೀವ ನಗರ ನಿವಾಸಿ ಸುರೇಶ್ ಎಂಬವರ ಮಗ ವಿಘ್ನೇಶ್ (23) ಎಂಬವರು ನ.17ರಂದು ಬೆಳಗ್ಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ತಲ್ಲೂರು ಗ್ರಾಮದ ಕಂಬಳಗದ್ದೆ ರಸ್ತೆಯ ನಿವಾಸಿ ಪ್ರೇಮ ಶೆಡ್ತಿ(66) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.16ರಂದು ಮನೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story