‘ಗಜ’ ಚಂಡಮಾರುತಕ್ಕೆ ತತ್ತರಿಸಿದ ಗ್ರಾಮ: ನಟ ವಿಶಾಲ್ ನಡೆಗೆ ವ್ಯಾಪಕ ಮೆಚ್ಚುಗೆ
ಚೆನ್ನೈ, ನ.26: ತಮಿಳುನಾಡು ಚಿತ್ರ ನಿರ್ಮಾಪಕರ ಮಂಡಳಿಯ ಅಧ್ಯಕ್ಷ ಹಾಗೂ ನಡಿಗರ್ ಸಂಘಂ ಕಾರ್ಯದರ್ಶಿಯಾಗಿರುವ ನಟ ವಿಶಾಲ್ ಅವರು ತಂಜಾವೂರು ಸಮೀಪದ ಕರಗವಯಲ್ ಎಂಬ ಸಂಪೂರ್ಣ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಚಂಡಮಾರುತ ‘ಗಜ’ದಿಂದ ತತ್ತರಿಸಿ ಹೋಗಿರುವ ಈ ಗ್ರಾಮದ ಜನರ ಪಾಲಿಗೆ ಅವರು ಆಶಾಕಿರಣವಾಗಿದ್ದಾರೆ. ಗಜ ಚಂಡಮಾರುತದಿಂದಾಗಿ ತೀವ್ರ ಬಾಧಿತ ಗ್ರಾಮಗಳಲ್ಲಿ ಕರಗವಯಲ್ ಗ್ರಾಮ ಕೂಡಸೇರಿದೆ.
ಗ್ರಾಮವನ್ನು ಮತ್ತೆ ಹಿಂದಿನಂತೆ ಮಾಡುವುದಾಗಿ ವಿಶಾಲ್ ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದ್ದಾರೆ. ತಾನು ಗ್ರಾಮವನ್ನು ದತ್ತು ತೆಗೆದುಕೊಂಡಿರುವ ಬಗ್ಗೆ ಟ್ವೀಟ್ ಮೂಲಕ ಹೇಳಿಕೊಂಡಿರುವ ವಿಶಾಲ್, ``ತಂಜಾವೂರು ಜಿಲ್ಲೆಯ ಕರಗವಯಲ್ ಗ್ರಾಮ ನನ್ನದು. ಅದನ್ನು ಮತ್ತೆ ಸಹಜ ಸ್ಥಿತಿಗೆ ತರುತ್ತೇನೆಂದು ಭರವಸೆ ನೀಡುತ್ತೇನೆ. ಇದು ಸದಾ ನನ್ನ ಜವಾಬ್ದಾರಿ,''ಎಂದು ಬರೆದಿದ್ದಾರೆ.
ಚಂಡಮಾರುತ ಗಜ ತಮಿಳುನಾಡಿನಲ್ಲಿ 45 ಮಂದಿಯನ್ನು ಬಲಿ ಪಡೆದುಕೊಂಡಿದೆಯಲ್ಲದೆ ಅಪಾರ ಬೆಳೆ ನಾಶಕ್ಕೆ ಕೂಡ ಕಾರಣವಾಗಿದೆ.
Next Story