ಹನುಮಂತ ‘ಮನುವಾದಿ’ ಜನರ ಗುಲಾಮನಾಗಿದ್ದ: ಬಿಜೆಪಿ ಸಂಸದೆ
ಲಕ್ನೋ, ಡಿ.4: ಹನುಮಂತ ದಲಿತ ಹಾಗು ಮನುವಾದಿ ಜನರ ಗುಲಾಮನಾಗಿದ್ದ ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದೆ ಸಾವಿತ್ರಿ ಭಾಯಿ ಫುಲೆ ಹೇಳಿದ್ದಾರೆ.
ದಲಿತರು ಮತ್ತು ಹಿಂದುಳಿದ ವರ್ಗಗಳ ಜನರನ್ನು ಕೋತಿಗಳು ಮತ್ತು ರಾಕ್ಷಸರು ಎಂದು ಕರೆಯಲಾಗುತ್ತಿತ್ತು ಎಂದವರು ಆರೋಪಿಸಿದರು. “ಹನುಮಾನ್ ದೇವರು ದಲಿತ ಹಾಗು ಮನುವಾದಿ ಜನರ ಗುಲಾಮನಾಗಿದ್ದ. ಹನುಮಂತ ದಲಿತ ಮತ್ತು ಓರ್ವ ಮನುಷ್ಯ. ಅವನು ಶ್ರೀರಾಮನಿಗಾಗಿ ಎಲ್ಲವನ್ನೂ ಮಾಡಿದ. ಆದರೆ ಆತನಿಗೆ ಬಾಲ ಏಕೆ ನೀಡಲಾಯಿತು. ಅವನನ್ನು ಕೋತಿಯನ್ನಾಗಿ ಏಕೆ ಮಾಡಲಾಯಿತು?” ಎಂದು ಫುಲೆ ಪ್ರಶ್ನಿಸಿದ್ದಾರೆ.
“ಶ್ರೀರಾಮನಿಗಾಗಿ ಎಲ್ಲವನ್ನೂ ಮಾಡಿದ ಮೇಲೆ ಆತನನ್ನು ಮನುಷ್ಯನನ್ನಾಗಿ ಮಾಡಬೇಕಿತ್ತು ವಿನಃ ಕೋತಿಯನ್ನಾಗಿ ಅಲ್ಲ. ಆ ಕಾಲದಲ್ಲೂ ಹನುಮಂತ ದಲಿತನಾದ ಕಾರಣ ತಾರತಮ್ಯವನ್ನು ಎದುರಿಸಬೇಕಾಯಿತು. ದಲಿತರಾದ ನಮ್ಮನ್ನೇಕೆ ಮನುಷ್ಯರನ್ನಾಗಿ ನೋಡುತ್ತಿಲ್ಲ?” ಎಂದವರು ಪ್ರಶ್ನಿಸಿದರು.
Next Story