ಮ.ಪ್ರದೇಶ: ಪೋಸ್ಟ್ ಮನ್ಗೆ ಥಳಿಸಿ ಅಂಚೆ ಮತಪತ್ರಗಳನ್ನು ದೋಚಿದರು
ಭಿಂದ್,ಡಿ.10: ಇಲ್ಲಿಯ ಜಿಲ್ಲಾ ಕಾರಾಗೃಹದ ಎದುರೇ ಪೋಸ್ಟ್ಮನ್ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಆತನ ಬಳಿಯಿದ್ದ 250ಕ್ಕೂ ಅಧಿಕ ಅಂಚೆ ಮತಪತ್ರಗಳನ್ನು ದೋಚಿದ ಘಟನೆ ಪಂಚರಾಜ್ಯ ಚುನಾವಣೆಯ ಮತಎಣಿಕೆಯ ಮುನ್ನಾದಿನವಾದ ಸೋಮವಾರ ಮಧ್ಯಾಹ್ನ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು ಅಂಚೆ ಮತಪತ್ರಗಳಿದ್ದ ಬ್ಯಾಗ್ನ್ನು ವಶಪಡಿಸಿಕೊಂಡಿದ್ದಾರೆ.
ಪೋಸ್ಟಮನ್ ರಾಜೇಂದ್ರ ಯಾದವ್ ಅವರು ಜಿಲ್ಲಾಧಿಕಾರಿಗಳ ಕಚೆೇರಿಗೆ ತೆೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ನಗರ ಎಸ್ಪಿ ಅಲೋಕ ಶರ್ಮಾ ತಿಳಿಸಿದರು.
ಈ ಘಟನೆಯ ಹಿಂದೆ ಸ್ಥಳೀಯ ಬಿಜೆಪಿ ನಾಯಕನೋರ್ವನ ಕೈವಾಡವಿದೆ ಎಂದು ಕಾಂಗ್ರೆಸ್ ಶಾಸಕ ಹೇಮಂತ ಕಟಾರೆ ಆರೋಪಿಸಿದ್ದಾರೆ.
Next Story