ಜನರು ಇಷ್ಟು ದೊಡ್ಡ ಆಶೀರ್ವಾದ ನೀಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ: ಛತ್ತೀಸ್ಗಢದ ಕಾಂಗ್ರೆಸ್ ವರಿಷ್ಠ
ರಾಯಪುರ, ಡಿ. 11: ‘‘ಇಷ್ಟು ದೊಡ್ಡ ಜಯ ನಮಗೆ ಸಿಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ’’ ಎಂದು ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಭೂಪೇಶ್ ಬಾೇಲ್ ಮಂಗಳವಾರ ಹೇಳಿದ್ದಾರೆ. ‘‘ಜನರು ಇಷ್ಟು ದೊಡ್ಡ ಆಶೀರ್ವಾದ ನೀಡುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. 60 ಸ್ಥಾನ ಸಿಗಬಹುದು ಎಂದು ನಾವು ನಿರೀಕ್ಷಿಸಿದ್ದೇವೆ.’’ ಎಂದು ಬಾೇಲ್ ತಿಳಿಸಿದ್ದಾರೆ.
‘‘ಮುಖ್ಯಮಂತ್ರಿ ಆಯ್ಕೆಯ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ನನಗೆ ನೀಡಿದ ಜವಾಬ್ದಾರಿಯನ್ನು ನಾನು ಪೂರೈಸಿದ್ದೇನೆ’’ ಎಂದು ಅವರು ಹೇಳಿದ್ದಾರೆ. ‘‘ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಅನ್ನು ನಾವು ತಳಮಟ್ಟದಲ್ಲಿ ಬಲಪಡಿಸಬೇಕು ಹಾಗೂ ಆ ಮೂಲಕ ಸಾಮಾನ್ಯ ಜನರ ಪರವಾಗಿ ಹೋರಾಡಬೇಕು’’ ಎಂದು ಬಾೇಲ್ ತಿಳಿಸಿದ್ದಾರೆ.
Next Story