ಡಿ. 16: ಸುರಿಬೈಲ್ ನಲ್ಲಿ ಎಸ್ ವೈ ಎಸ್ ದ.ಕ. ಜಿಲ್ಲಾ ಅಸೆಂಬ್ಲಿ
ಮಂಗಳೂರು, ಡಿ. 14: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಕಳೆದ ಮೂರು ತಿಂಗಳಿಂದ ಬ್ರಾಂಚ್, ಸೆಂಟರ್ ಮತ್ತು ಝೋನ್ ಗಳಲ್ಲಿ ಅಸೆಂಬ್ಲಿ ಕಾರ್ಯಕ್ರಮ ನಡೆದಿದ್ದು, ಡಿ. 16ರಂದು ಅಪರಾಹ್ನ 2 ಘಂಟೆಗೆ ಸುರಿಬೈಲ್ ದಾರುಲ್ ಅಶ್ಹರಿಯ್ಯಾ ವಿದ್ಯಾ ಕೇಂದ್ರ ದಲ್ಲಿ ಜಿಲ್ಲಾ ಅಸೆಂಬ್ಲಿ ನಡೆಯಲಿದೆ.
ಜಿಲ್ಲಾಧ್ಯಕ್ಷ ಪಿಎಂ ಉಸ್ಮಾನ್ ಸಅಧಿ ಪಟ್ಟೋರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರಾದ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ವಿಷಯ ಮಂಡಿಸುವರು ಎಂದು ಎಸ್ ವೈ ಎಸ್ ದಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ತಿಳಿಸಿದ್ದಾರೆ.
Next Story