ನಾಗೂರು ಮಸೀದಿಗೆ ಹಂದಿ ಮಾಂಸ ಎಸೆತ: ಸಿಪಿಎಂ ಖಂಡನೆ
ಉಡುಪಿ, ಜ. 15: ನಾಗೂರಿನ ಮಸೀದಿಗೆ ಕಿಡಿಗೇಡಿಗಳು ಹಂದಿ ಮಾಂಸ ಎಸೆದಿರುವ ಪ್ರಕರಣವನ್ನು ಸಿಪಿಎಂ ಬೈಂದೂರು ವಲಯ ಸಮಿತಿ ಖಂಡಿಸಿದೆ.
ಲೋಕ ಸಭಾ ಚುನಾವಣೆಯ ಸಮೀಪಿಸುತ್ತಿದ್ದಂತೆ ಶಾಂತಿ ಕದಡಿ ಓಟು ಪಡೆಯಲು ಕೆಲವು ಮತೀಯ ಶಕ್ತಿಗಳು ಯತ್ನಿಸುತ್ತಿದ್ದು ಜನರು ಇಂತಹ ಶಕ್ತಿಗಳ ಶಾಂತಿ ಕದಡುವ ಪ್ರಯತ್ನ ವಿಫಲಗೊಳಿಸಬೇಕು. ಪೊಲೀಸರು ತಪಿತಸ್ಥರನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಿಪಿಎಂ ಒತ್ತಾಯಿಸಿದೆ.
Next Story