ವರ್ತೂರು ಕೆರೆಯಲ್ಲಿ ಬೆಂಕಿ: ನಾಗರಿಕರಲ್ಲಿ ಆತಂಕ
ಬೆಂಗಳೂರು, ಜ.21: ನಗರದ ವರ್ತೂರು ಕರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಣ ಗಿಡಗಳು ಹೊತ್ತಿ ಉರಿಯುತ್ತಿದ್ದರ ಪರಿಣಾಮ ಇಡೀ ಕೆರೆಯಲ್ಲಿ ಹೊಗೆ ಆವರಿಸಿಕೊಂಡಿತ್ತು.
ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುತ್ತಮುತ್ತಲಿನ ಕಾರ್ಖಾನೆಗಳ ತ್ಯಾಜ್ಯ ಕೆರೆಗೆ ಸೇರುತ್ತಿರುವ ಕಾರಣ, ಕೆರೆಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಬೆಂಕಿ ಬಿದ್ದ ಕಾರಣ ಕೆರೆಯಲ್ಲಿನ ಜಲಚರಗಳ ಮಾರಣಹೋಮವಾಗಿದೆ ಎಂದು ಹೇಳಲಾಗುತ್ತಿದೆ.
Next Story