ಮೌಢ್ಯ ಬಿತ್ತುವವರು
ಮಾನ್ಯರೇ,
ಟಿವಿ ಮಾಧ್ಯಮಗಳು ಮತ್ತು ಪತ್ರಿಕೆಗಳ ಮೇಲೆ ಜನ ಸಾಮಾನ್ಯರಿಗೆ ವಿಶೇಷವಾದ ಗೌರವವಿದ್ದು, ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಪ್ರಮುಖ ಜವಾಬ್ದಾರಿ ಮಾಧ್ಯಮಗಳು ಮತ್ತು ಪತ್ರಿಕೆಗಳ ಸಂಪಾದಕರ ಮೇಲೆ ಇದೆ. ಆದರೆ ರಾಜ್ಯದ ಕೆಲವು ಪ್ರಮುಖ ಟಿವಿ ಮಾಧ್ಯಮಗಳು ಮತ್ತು ಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಹಣ ಗಳಿಸುವ ಒಂದೇ ಉದ್ದೇಶದಿಂದ ತಮ್ಮ ಟಿವಿ ಚಾನೆಲ್ ಮತ್ತು ಪತ್ರಿಕೆಗಳಲ್ಲಿ ಜನರನ್ನು ಹಾದಿ ತಪ್ಪಿಸುವ, ಮೌಢ್ಯಕ್ಕೆ ತಳ್ಳುವ ಜ್ಯೋತಿಷ್ಯ, ಮಾಟ-ಮಂತ್ರ, ವಾಮಾಚಾರ, ವಶೀಕರಣ, ಯಂತ್ರ, ವಾಸ್ತು ಮುಂತಾದ ಹಲವು ರೀತಿಯ ಜಾಹೀರಾತುಗಳನ್ನು ಪ್ರಕಟಣೆ ಮಾಡುತ್ತಿವೆ. ಕೆಲವು ಪತ್ರಿಕೆಗಳಲ್ಲಂತೂ ಇಂತಹ ಮೋಸದ ಜಾಹೀರಾತುಗಳು ಪ್ರಮುಖ ಪುಟಗಳಲ್ಲೇ ಪ್ರಕಟಣೆಯಾಗುತ್ತಿರುವುದು ಅತ್ಯಂತ ವಿಷಾದನೀಯ. ಜನರಲ್ಲಿ ವೌಢ್ಯದ ವಿರುದ್ಧ ಎಚ್ಚರಿಸಬೇಕಾದವರೇ ಹಣ ಗಳಿಸುವ ಉದ್ದೇಶದಿಂದ ವೌಢ್ಯಗಳನ್ನು ಬಿತ್ತರಿಸಿದರೆ ಸಮಾಜ ಸುಧಾರಣೆಯ ದಾರಿ ಹಿಡಿದೀತೇ?
Next Story