ನದಿಯಲ್ಲಿ ಮುಳುಗಿ ಮೃತ್ಯು
ಬ್ರಹ್ಮಾವರ, ಫೆ.19: ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಫೆ.18ರಂದು ಬ್ರಹ್ಮಾವರ ಆರೂರು ಎಂಬಲ್ಲಿ ನಡೆದಿದೆ.
ಮೃತರನ್ನು ಭಗವಾನ್ ಯಾನೆ ಬೊಗ್ಗು(68) ಎಂದು ಗುರುತಿಸಲಾಗಿದೆ.
ಇವರು ಮಧ್ಯಾಹ್ನ ವೇಳೆ ನದಿಯಲ್ಲಿ ಕಪ್ಪೆಚಿಪ್ಪುಹೆಕ್ಕುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿ ಮೃತದೇಹವನ್ನು ಸಂಜೆ ವೇಳೆ ಮೇಲಕ್ಕೆತ್ತಿ ದರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story