ಆತೂರು ನಡುಅಂಗಡಿ ಪುತ್ತುಮೋನು ಮಕ್ಕಾದಲ್ಲಿ ನಿಧನ
ಉಪ್ಪಿನಂಗಡಿ, ಫೆ. 19: ಆತೂರು ನಡುಅಂಗಡಿ ಚೈಯ್ಯಬ್ಬ ಯಾನೆ ಬಿ.ಎನ್. ಪುತ್ತುಮೋನು (67) ಸೌದಿ ಅರೇಬಿಯಾದ ಪವಿತ್ರ ಮಕ್ಕಾ ಮಸೀದಿಯಲ್ಲಿ ಮಂಗಳವಾರ ಮಧ್ಯಾಹ್ನ ಉಮ್ರಾ ಕರ್ಮ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು.
ಹಿರೇಬಂಡಾಡಿ ಗ್ರಾಮದ ಬೊಳುಂಬುಡ ನಿವಾಸಿ ಆಗಿರುವ ಪುತ್ತುಮೋನು ತನ್ನ ಪತ್ನಿ, ತಂಗಿ, ಹಾಗು ಕುಟುಂಬ ಸೇರಿದಂತೆ 6 ಮಂದಿ ಶನಿವಾರ ತನ್ನ ಮನೆಯಿಂದ ಮಕ್ಕಾ ಯಾತ್ರೆ ಹೋಗಿದ್ದು, ರವಿವಾರ ಅಲ್ಲಿ ತಲುಪಿದ್ದರು. ರವಿವಾರ, ಸೋಮವಾರ 2 ಉಮ್ರಾ ಕರ್ಮ ನಿರ್ವಹಿಸಿ, ಮಂಗಳವಾರ ಹಠಾತ್ ಕುಸಿದು ಬಿದ್ದು ನಿಧನ ಹೊಂದಿದ್ದಾರೆ.
ಬಿ.ಎನ್. ಪುತ್ತುಮೋನುರವರು ಬೀಡಿ ಗುತ್ತಿಗೆದಾರರಾಗಿದ್ದು, ಅದನ್ನು ಬಿಟ್ಟು ಕೆಲ ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅಪಾರ ದೈವಭಕ್ತರಾಗಿ, ತನ್ನ ಸೌಮ್ಯ ಸ್ವಭಾವದ ಮೂಲಕ ಪುತ್ತುಮೋನಾಕ ಎಂದೇ ಚಿರಪರಿಚಿತರಾಗಿದ್ದರು.
Next Story