ಫೆ.21ರಂದು ಅಮ್ಟೂರಿಗೆ ಮುಳ್ಳೂರುಕೆರೆ ಮುಹಮ್ಮದಲಿ ಸಖಾಫಿ
ಕಲ್ಲಡ್ಕ, ಫೆ.20: ಇಲ್ಲಿಗೆ ಸಮೀಪದ ಅಮ್ಟೂರು-ಕೆದಿಲದ ಎಸ್ಸೆಸ್ಸೆಫ್ ಶಾಖೆಯ ಆಶ್ರಯದಲ್ಲಿ ನಡೆಯವ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಫೆ.21ರಂದು ಸಂಜೆ 7ಕ್ಕೆ ಕೆದಿಲದಲ್ಲಿ ಜರುಗಲಿದೆ.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮುಳ್ಳೂರುಕೆರೆ ಮುಹಮ್ಮದಲಿ ಸಖಾಫಿ ಆಗಮಿಸುವರು. ಉದ್ಯಾವರ ಅಸ್ಸೈಯದ್ ಇಬ್ರಾಹೀಂ ಪೂಕುಂಞಿ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story