ದ್ವೇಷ ಮರೆತು ಒಟ್ಟಿಗೆ ಫೋಟೋ ಕ್ಲಿಕ್ಕಿಸಿದ ಕಮಲ, ಕೈ ನಾಯಕರು
ಸುಂಟಿಕೊಪ್ಪ,ಎ.18: ಚುನಾವಣಾ ಪ್ರಚಾರದ ವೇಳೆ ಆರೋಪ ಪ್ರತ್ಯಾರೋಪದ ಕೆಸರೆರಚಾಟದಲ್ಲಿ ತೊಡಗಿದ್ದ ‘ಕಮಲ’ ‘ಕೈ’ ನಾಯಕರು ಮತದಾನದಂದು ಹಾಯ್ ಬಾಯ್ ಎಂದು ಒಟ್ಟಿಗೆ ಕಾಣಿಸಿಕೊಂಡರು.
ಸುಂಟಿಕೊಪ್ಪದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕಾಂಗ್ರೆಸ್ನ ಜಿ.ಪಂ.ಸದಸ್ಯ ಪಿ.ಎಂ. ಲತೀಫ್, ತಾ.ಪಂ. ಸದಸ್ಯೆ ವಿಮಲಾವತಿ, ಗ್ರಾ.ಪಂ. ಸದಸ್ಯರಾದ ಗಿರಿಜಾ ಉದಯಕುಮಾರ್, ರತ್ನಾ ಜಯನ್, ಶೋಭಾ ರವಿ, ಶಿವಮ್ಮ ಮಹೇಶ್ ಹಾಗೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಆತ್ಮೀಯವಾಗಿ ಬೆರೆತುಕೊಂಡು ಒಟ್ಟಿಗೆ ನಿಂತು ಸೆಲ್ಪಿ ತೆಗೆಸಿಕೊಂಡರು.
ರಾಜಕೀಯವಾಗಿ ನಾವು ತದ್ವಿರುದ್ಧವಾದರೂ, ಸ್ನೇಹಚಾರದಲ್ಲಿ ನಾವೆಲ್ಲಾರೂ ಒಂದೇ ಎಂಬ ಸಂದೇಶ ರವಾನಿಸಿದರು.
Next Story