ನಕಲಿ ಮತದಾನ ಮಾಡಲು ಬಂದಿದ್ದ ಮೂವರ ಬಂಧನ
ಬೆಂಗಳೂರು, ಎ.18: ಜ್ಞಾನಭಾರತಿ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ ಮಾಡಲು ಬಂದ ಆಂಧ್ರ ಮೂಲದ 13 ಮಂದಿಯ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಜ್ಞಾನಭಾರತಿ ಮತಗಟ್ಟೆಯೊಂದರಲ್ಲಿ ಆಂಧ್ರದವರೆಂದು ಹೇಳಲಾದ 13 ಮಂದಿ ಮತ ಚಲಾಯಿಸಲು ನಿಂತಿದ್ದರು. ಅನುಮಾನ ಬಂದು ಚುನಾವಣಾಧಿಕಾರಿಗಳು ಪ್ರಶ್ನಿಸುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದರು.
ಮೂವರನ್ನು ಮಾತ್ರವೇ ಬಂಧಿಸಲಾಯಿತು. ಉಳಿದ 10 ಮಂದಿ ಪರಾರಿಯಾಗಿದ್ದಾರೆ. ಆಂಧ್ರದಲ್ಲಿ ಇಂದು ಬೆಳಗ್ಗೆ ಮತಚಲಾಯಿಸಿ ನೇರವಾಗಿ ಬೆಂಗಳೂರಿಗೆ ಬಂದಿರುವ ಇವರು, ಬೆರಳಿನಲ್ಲಿ ಹಾಕಲಾಗಿದ್ದ ಶಾಹಿಯನ್ನು ಅಳಿಸಿ ಇಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಲು ಪ್ರಯತ್ನಿಸಿದ್ದರು. ಪರಾರಿಯಾಗಿರುವ 10 ಮಂದಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Next Story