ಉಡುಪಿ: ಎ. 27ಕ್ಕೆ ದ್ವಿತೀಯ ವಾರ್ಷಿಕ ಸುನ್ನಿ ಇಜ್ತಿಮಾ
ಉಡುಪಿ, ಎ. 25: ಉಡುಪಿ ಜಿಲ್ಲಾ ಸುನ್ನಿ ದಾವತೆ ಇಸ್ಲಾಮೀ ವತಿಯಿಂದ ಎರಡನೇ ವರ್ಷದ ಸುನ್ನಿ ಇಜ್ತಿಮಾ ಎ. 27ರಂದು ಕೊಳಂಬೆ ಶಾಂತಿನಗರದ ಮದೀನ ಮಸೀದಿ ಬಳಿಯ ಆಶಾ ನಿಲಯದಲ್ಲಿ ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಸುಬಾನ್ ಅಹ್ಮದ್ ಹೊನ್ನಾಳ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಖ್ಯ ಭಾಷಣಕಾರರಾಗಿ ಲಂಡನ್ನ ವರ್ಲ್ಡ್ ಇಸ್ಲಾಮಿಕ್ ಮಿಷನ್ನ ಪ್ರಧಾನ ಕಾರ್ಯದರ್ಶಿ ಅಲ್ಲಾಮ ಖಮರುಝುಮಾನ್ ಖಾನ್ ಅಜ್ಮಿ ಆಗಮಿ ಸಲಿದ್ದಾರೆ. ಉಳಿದಂತೆ ಮುಂಬಯಿಯ ಅತಾಯೇ ಹುಜ್ಹೂರ್ ಮುಫ್ತಿಎ ಅಝಮ್ ಎ ಹಿಂದ್ ಅಮೀರ್ ಸುನ್ನಿ ದಾವತೆ ಇಸ್ಲಾಮಿ ವೌಲಾನಾ ಮುಹಮ್ಮದ್ ಶಾಕಿರ್ ಅಲಿ ನೂರಿ, ಅಜ್ಮೀರ್ ಶರೀಫ್ ಎಸ್ಡಿಐ ಹಾಫಿಝ್ ಮೊಹಮ್ಮದ್ ಮುಈನುದ್ದೀನ್ ಖಾದ್ರಿ ಹಾಗೂ ಎಸ್ಡಿಐ ಹುಬ್ಬಳ್ಳಿಯ ಮುಹಮ್ಮದ್ ಹುಸೈನ್ ಹಾಗೂ ಕರಾವಳಿಯ ಉಳಿದ ಜಿಲ್ಲೆಗಳ ಉಲಮ, ಸಾದಾತುಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಖಯ್ಯಿಂ ಹೂಡೆ, ತೌಸೀಫ್ ಅಹ್ಮದ್ ಹೊನ್ನಾಳ, ಅಬ್ದುಲ್ ರೆಹಮಾನ್ ತಸ್ವಿ ಖಲ್ಕಟ್ಟ ಉಪಸ್ಥಿತರಿದ್ದರು.