ಕೊಣಾಜೆ: ರಮಝಾನ್ ಪ್ರಯುಕ್ತ ಕಿಟ್ ವಿತರಣೆ
ಕೊಣಾಜೆ: ಪವಿತ್ರ ರಮಝಾನ್ ಪ್ರಯುಕ್ತ ಪ್ರೊ. ಸುರೇಂದ್ರ ರಾವ್, ಕೊಣಾಜೆ ಉಪನಿರೀಕ್ಷಕ ಉಮೇಶ್ ಕುಮಾರ್ ಡಾ.ಶಾಂತಿ, ವಿವಿಯ ಮಾಜಿ ಕುಲಸಚಿವ ಪ್ರೊ.ಚಿನ್ನಪ್ಪಗೌಡ, ನಿವೃತ್ತ ಇಂಜಿನಿಯರ್ ಶಂಕರ ನಾರಾಯಣ ಭಟ್, ಪ್ರೊ.ಕೆ.ಕೆ.ಆಚಾರಿ ಹಾಗೂ ಪ್ರೊ.ಕೆ.ಆರ್.ಶ್ರೀಧರ್ ಇವರಿಗೆ ಪವಿತ್ರ ಕುರ್ಆನ್, ಪ್ರವಾದಿ ಸಂದೇಶವುಳ್ಳ ಪುಸ್ತಕದೊಂದಿಗೆ ಕಿಟ್ ನೀಡಿದರು.
ಈ ಸಂದರ್ಭ ಕೊಣಾಜೆ ಗ್ರಾಮ ಪಂ. ಮಾಜಿ ಅಧ್ಯಕ್ಷ ಶೌಕತ್ ಅಲಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್ ಹಾಗೂ ಸಂಘಟನಾ ಕಾರ್ಯದರ್ಶಿ ಮೇಗ ಸಲೀಂ ಹಾಗೂ ಯುವ ಕಾಂಗ್ರೆಸ್ ಮುಖಂಡ ಅಝರ್ ಕೋಡಿಜಾಲ್ ಉಪಸ್ಥಿತರಿದ್ದರು.
Next Story