ಮತದಾನ ಮಾಡದಂತೆ ತಡೆಯಲು ಬೆರಳಿಗೆ ಶಾಯಿ ಹಾಕಿದ ಬಿಜೆಪಿ ಕಾರ್ಯಕರ್ತರು: ಗ್ರಾಮಸ್ಥರ ಆರೋಪ
ಫೋಟೊ ಕೃಪೆ: ANI
ಉತ್ತರ ಪ್ರದೇಶ, ಮೇ 19: ಇಂದು ನಡೆಯುತ್ತಿರುವ 7ನೆ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದಂತೆ ತಡೆಯಲು ಬಿಜೆಪಿಯ ಕಾರ್ಯಕರ್ತರೆನ್ನಲಾದ ಮೂವರು ತಮ್ಮ ಬೆರಳುಗಳಿಗೆ ಶನಿವಾರವೇ ಶಾಯಿ ಹಾಕಿ 500 ರೂ. ನೀಡಿದ್ದಾರೆ ಎಂದು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ತಾರಾ ಜಿವಾಪುರ್ ಗ್ರಾಮದ ಜನರು ಆರೋಪಿಸಿದ್ದಾರೆ.
“ಅವರು ಬಿಜೆಪಿಯವರಾಗಿದ್ದು, ಪಕ್ಷಕ್ಕೆ ನಾವು ಮತ ನೀಡುತ್ತೇವೆಯೇ ಎಂದು ಪ್ರಶ್ನಿಸಿದ್ದರು. ಇನ್ನು ನೀವು ಮತದಾನ ಮಾಡಲು ಸಾಧ್ಯವಿಲ್ಲ ಎಂದ ಅವರು ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಹೇಳಿದರು” ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದ್ದಾರೆ.
ಗ್ರಾಮಸ್ಥರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚಂದೌಲಿಯ ಎಸ್ ಡಿಎಂ ಕೆ.ಆರ್.ಹರ್ಷ್ ಮತದಾನ ಮಾಡಲು ಗ್ರಾಮಸ್ಥರಿಗೆ ಅವಕಾಶವಿದೆ. ದೂರಿನ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
Next Story