ನವಿಲು ಬೇಟೆ: ಇಬ್ಬರು ಯುವಕರ ಬಂಧನ
ಮಂಡ್ಯ, ಜೂ.12: ಕೃಷ್ಣರಾಜಪೇಟೆ ತಾಲೂಕಿನ ಜಾಗಿನಕೆರೆ ಬಳಿ ಚಾಟರ್ ಬಿಲ್ಲನ್ನು ಬಳಸಿ ರಾಷ್ಟ್ರೀಯ ಪಕ್ಷಿ ನವಿಲಿನ ಭೇಟೆಯಾಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಲಾಗಿದೆ.
ನಾಗಮಂಗಲ ತಾಲೂಕಿನ ಶಿಕಾರಿಪುರದ ಶಿಕಾರಿಪುರದ ಎಲ್ಲೇಶ್(19) ಮತ್ತು ಪ್ರಭು(20) ಬಂಧಿತರು. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಕ್ರಮವಹಿಸಲಾಗಿದೆ.
ವಲಯ ಅರಣ್ಯಾಧಿಕಾರಿ ಮಧುಸೂದನ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಮೃತ ನವಿಲು, ಟಿವಿಎಸ್ ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Next Story