ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಸುಗ್ರೀವಾಜ್ಞೆ ಹೊರಡಿಸಲಿ: ಅಯೋಧ್ಯೆಯಲ್ಲಿ ಉದ್ಧವ್ ಠಾಕ್ರೆ
ಅಯೋಧ್ಯೆ, ಜೂ.16: ರಾಮ ಮಂದಿರ ನಿರ್ಮಾಣಕ್ಕಾಗಿ ಸರಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಮ ಮಂದಿರವನ್ನು ನಿರ್ಮಿಸುವ ಧೈರ್ಯವಿದೆ ಮತ್ತು ಅವರನ್ನು ತಡೆಯಲು ಯಾರೂ ಇಲ್ಲ ಎಂದರು.
ತಮ್ಮ ಪುತ್ರ ಆದಿತ್ಯ ಠಾಕ್ರೆ ಜೊತೆ ರಾಮ್ ಲಲ್ಲಾದಲ್ಲಿ ಉದ್ಧವ್ ಠಾಕ್ರೆ ಪ್ರಾರ್ಥನೆ ನೆರವೇರಿಸಿದರು. ಚುನಾವಣೆಯ ನಂತರ ಮತ್ತೊಮ್ಮೆ ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂದು ಕಳೆದ ನವೆಂಬರ್ ನಲ್ಲಿ ಉದ್ಧವ್ ಠಾಕ್ರೆ ಹೇಳಿದ್ದರು.
Next Story