ಕಾಂಗ್ರೆಸ್ ವಿರುದ್ಧ ದೂರು ದಾಖಲಿಸಿದ ಅಂಬೇಡ್ಕರ್ ಮೊಮ್ಮಗ
ಹೊಸದಿಲ್ಲಿ, ಜೂ. 19: ತಮ್ಮ ಪಕ್ಷವಾದ ರಿಪಬ್ಲಿಕನ್ ಸೇನಾದ ಅಧ್ಯಕ್ಷ ಹಾಗೂ ಬಿ.ಆರ್. ಅಂಬೇಡ್ಕರ್ ಮೊಮ್ಮಗ ಆನಂದ್ರಾಜ್ ಅಂಬೇಡ್ಕರ್ ಲೋಕಸಭಾ ಚುನಾವಣೆಗಿಂತ ಮುನ್ನ ಕಾಂಗ್ರೆಸ್ ಸೇರಿದ್ದಾರೆ ಎಂದು ಕೆಲವು ವ್ಯಕ್ತಿಗಳು ಸುಳ್ಳು ಸುದ್ದಿ ಹರಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ರಿಪಬ್ಲಿಕನ್ ಸೇನಾ ದಿಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
‘‘ಸುಳ್ಳು ಸುದ್ದಿ ಕುರಿತಂತೆ ನಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ’’ ಎಂದು ಆನಂದ್ ರಾಜ್ ಅಂಬೇಡ್ಕರ್ ಹೇಳಿದ್ದಾರೆ. ಈ ನಡುವೆ ತಮ್ಮ ಸಂವಹನ ತಂಡ ಮೇ 4ರಂದು ತಪ್ಪು ಮಾಡಿರುವುದನ್ನು ದಿಲ್ಲಿ ಕಾಂಗ್ರೆಸ್ನ ನಾಯಕರು ಒಪ್ಪಿಕೊಂಡಿದ್ದಾರೆ. ‘‘ಬಿಜೆಪಿ, ಎಎಪಿ ಹಾಗೂ ರಿಪಬ್ಲಿಕನ್ ಸೇನಾ ಪಕ್ಷದ ಕೆಲವು ನಾಯಕರು ನಮ್ಮ ಪಕ್ಷ ಸೇರುವುದು ನಮಗೆ ತಿಳಿದಿತ್ತು. ಆದರೆ, ಸಂವಹನ ತಂಡ ಆನಂದ್ ರಾಜ್ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳುವ ತಪ್ಪು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು ಎಂದು ಹೆಸರು ಹೇಳಲಿಚ್ಛಿಸದ ದಿಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
Next Story